ಸುರಪುರ: ನಗರದ ಶ್ರೀ ಪ್ರಭು ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸುರಪುರ ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್.) ಘಟಕ, ಎನ್.ಸಿ.ಸಿ. ಹಾಗೂ ಬಿ.ಜೆ.ಪಿ. ಮಂಡಲ ಯುವಮೊರ್ಚ, ಸುರಪುರ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಪ್ರೊ. ಎಮ್.ಡಿ. ವಾರಿಸ್, ಎನ್.ಸಿ.ಸಿ. ಅಧಿಕಾರಿಯಾದ ಲೇಫ್ಟಿನೆಂಟ್ ಡಾ. ರಮೇಶ ಬಿ. ಶಹಪುರಕರ್, ಕಛೇರಿ ಅಧೀಕ್ಷಕರಾದ ಮಲ್ಹಾರರಾವ್ ಕುಲ್ಕರ್ಣಿ, ಎನ್.ಎಸ್.ಎಸ್. ಅಧಿಕಾರಿ ಡಾ. ಸಾಯಿಬಣ್ಣ ಮುಡಬೂಳ ಸಂತೋಷ ಹೆಡಗಿನಾಳ, ಮಂಜುನಾಥ ಚೆಟ್ಟಿ, ಬಿ.ಜೆ.ಪಿ. ಮಂಡಲ ಯುವಮೊರ್ಚದ ಅಧ್ಯಕ್ಷರಾದ ಶ್ರವಣಕುಮಾರ ನಾಯಕ ನಿಂಗಯ್ಯ ಪೂಜಾರಿ ಚೌಡೇಶ್ವರಹಾಳ ಬಿ.ಜೆ.ಪಿ. ತಾಲೂಕಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಕನ್ನೇಳ್ಳಿ, ಉಪಾಧ್ಯಕ್ಷರಾದ ಸಂಗನಗೌಡ ಬೈಚಬಾಳ, ರಮೇಶ ಗೌಡ ಜಿಲ್ಲಾ ಕಾರ್ಯದರ್ಶಿ, ಯುವ ಮುಖಂಡರುಗಳಾದ ಶೇಕು ಭೂಮಶೆಟ್ಟಿ, ಕೃಷ್ಣಾ ಮಂಗಿಹಾಳ, ಮಹೇಶ ಜಾಲಿಬೇಂಚಿ, ಯಮನಪ್ಪ ಕೂಡ್ಲಿಗಿ, ವಿಜಯಕುಮಾರ ಕಾಲೇಜಿನ ಅಲ್ಲದೇ ಎನ್.ಎಸ್.ಎಸ್., ಎನ್.ಸಿ.ಸಿ. ವಿದ್ಯಾರ್ಥಿಗಳು ಹಾಗೂ ಬಿ.ಜೆ.ಪಿ. ಯುವಮೊರ್ಚಾದ ಕಾರ್ಯಕಾರಣಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.