ನಕ್ಸಲ್​ ಎನ್​ಕೌಂಟರ್ ವೇಳೆ ಕಾರ್ನಾಟಕ ಮೂಲದ ಸಿ.ಆರ್.ಪಿ.ಎಫ್ ಯೋಧ ಸೇರಿ ಮೂವರು ಸಾವು

0
97

ಕಲಬುರಗಿ/ ಛತ್ತಿಸಗಡ್: ಛತ್ತಿಸಗಡ್ ನ ಕೇಶ್ಕುತುಲ್ ಗ್ರಾಮದ ಹತ್ತಿರ ಇಂದು ನಕ್ಸಲ್​ ಎನ್​ಕೌಂಟರ್ ವೇಳೆ ಮೂವರು ಸಿ.ಆರ್ .ಪಿ.ಎಫ್ ಯೋಧರು ಹುತಾತ್ಮರಾಗಿರು ಘಟನೆ ಸಂಭವಿಸಿದೆ.

Contact Your\'s Advertisement; 9902492681

ಘಟನೆಯಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ ಪೊಲೀಸ್ ಪಾಟೀಲ (50) ಸಾವನ್ನಪ್ಪಿದ್ದು, ಉತ್ತರಪ್ರದೇಶದ ಅಲೀಗಢ​ ಮೂಲದ ಎಸ್​ಐ/ಜಿಡಿ ಮದನ್​ ಪಾಲ್ ಸಿಂಗ್​ (52) ಹಾಗೂ ಕೇರಳದ ಇಡುಕ್ಕಿ ಮೂಲದ ಸಂಜು ಒ.ಪಿ (47) ಘಟನೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಎಂದು ತಿಳಿದು ಬಂದಿದೆ.

ಹುತಾತ್ಮ ಯೋಧನ ಮಹಾದೇವ ಅವರ ಪಾರ್ಥೀವ ಶರೀರ ನಾಳೆ ಹೈದ್ರಾಬಾದ್ ನಿಂದ ರಸ್ತೆ ಮೂಲಕ ಗ್ರಾಮಕ್ಕೆ ಆಗಮಿಸಲಿದೆ. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಹುತಾತ್ಮ ಮಾಹಾದೇವ ಸಿಆರ್.ಪಿ.ಎಫ್.ನಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here