ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದರೆ ದೋಣಿ ಮುಳುಗಿದಂತೆ:ಅವಂಟಿ

0
268

ಚಿತ್ತಾಪುರ:ಬಿ. ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದರೆ ಬಿಜೆಪಿ ದೋಣಿ ಮುಳುಗಿದಂತಾಗುತ್ತದೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಪ್ರಸಾದ ಅವಂಟಿ ಅವರು ಹೇಳಿದ್ದಾರೆ.

ಹೆಚ್.ವಿಶ್ವನಾಥ ಅವರು ವಿರೋಧ ಬಣದಲ್ಲಿ ಸೇರಿಕೊಂಡು ಬಿ ಎಸ್ ವೈ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆಯಲ್ಲ.ಅವರು ಚುನಾವಣಾಯಲ್ಲಿ ಸೋತರು ಎಂ ಎಲ್ ಸಿ ಮಾಡಿರುವುದು ಯಡಿಯೂರಪ್ಪನವರು ಇದನ್ನು ವಿಶ್ವನಾಥ ಅವರು ಮರೆಯಬಾರದು.ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರು ಪ್ರಮುಖ ಪಾತ್ರ ವಹಿಸಿದ್ದರು.

Contact Your\'s Advertisement; 9902492681

ಮುಖ್ಯಮಂತ್ರಿಯಾದಾಗಿನಿಂದ ಅವರ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.ಯಾವುದೇ ಕಾರಣಕ್ಕೂ ಅವರನ್ನು ಬದಲಾವಣೆ ಮಾಡಬಾರದು ಎಂದಿಗೂ ನಮ್ಮ ನಾಯಕರು ಯಡಿಯೂರಪ್ಪನವರೇ ಮುಂದೇನು ಅವರೇ ನಮ್ಮ ನಾಯಕರು ಎಂದು ಅವಂಟಿ ತಿಳಿಸಿದರು.

ನೆರೆ ರಾಜ್ಯ ತಮಿಳುನಾಡಿನಲ್ಲಿ ಕರುಣಾನಿಧಿಯವರು ಗಾಲಿ ಕುರ್ಚಿ ಮೇಲೆ ಕುಳಿತು ಆಡಳಿತ ನಡೆಸಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಆಡಳಿತ ನಡೆಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥವಾಗಿದ್ದಾರೆ ಅವರನ್ನು ಈ ಹುದ್ದೆಯಿಂದ ಇಳಿಸಲು ಅನವಶ್ಯಕ ತೊಂದರೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here