ಅಂಬಾಭವಾನಿ ದೇವಸ್ಥಾನದ ಗೋಡೆ ತೆರವು ಮರು ಅಳತೆಗೆ ಭಕ್ತರ ಮನವಿ

0
36

ಸುರಪುರ: ನಗರದ ರಂಗಂಪೇಟೆಯಲ್ಲಿರುವ ಭಾವಸಾರ ಕ್ಷತ್ರೀಯ ಸಮುದಾಯದ ಆರಾಧ್ಯ ದೇವತೆ ಅಂಬಾಭವಾನಿ ದೇವಸ್ಥಾನದ ಗೋಡೆ ತೆರವುಗೊಳಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಅಂಬಾಭವಾನಿ ಭಕ್ತರು ಗುರುವಾರ ನಗರಸಭೆಗೆ ಮನವಿ ಸಲ್ಲಿಸಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರಿಗೆ ಮನವಿ ಸಲ್ಲಿಸಿ ಅಂಬಾಭವಾನಿ ದೇವಸ್ಥಾನದ ಗೋಡೆಯನ್ನು ಅಳತೆಗು ಮೀರಿ ಹೊಡೆಯಲಾಗಿದೆ.ಆದ್ದರಿಂದ ನಗರಸಭೆಯ ಅಧ್ಯಕ್ಷರು ಮತ್ತು ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸರಿಯಾದ ಅಳತೆಯನ್ನು ಗುರುತಿಸುವಂತೆ ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರೀಯ ಸಮುದಾಯದ ಅಧ್ಯಕ್ಷ ಅರುಣಕುಮಾರ ಪುಲ್ಸೆ ಓಂದೇವ ಮಹೇಂದ್ರಕರ್ ಶ್ರೀನಿವಾಸ ದಾಯಪುಲೆ ರಾಜು ಮಹೇಂದ್ರಕರ್ ಸತೀಶ ಬಾಸುತ್ಕರ್ ರಾಜು ಪುಲ್ಸೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here