ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವೆನು: ಶಾಸಕ ರಾಜುಗೌಡ

0
17

ಸುರಪುರ: ಪತ್ರಕರ್ತರ ಯಾವುದೇ ಬೇಡಿಕೆಗಳಿದ್ದರು ಅವುಗಳನ್ನು ಈಡೇರಿಸುವ ಕೆಲಸ ಮಾಡುವೆನು ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹಾಗು ಶಾಸಕ ರಾಜುಗೌಡ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲೀ ಭೇಟಿ ಮಾಡಿದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿ,ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಅಲ್ಲದೆ ಕೆಜೆಯು ಸಂಘಟನೆಯ ಕಾರ್ಯಾಲಯಕ್ಕೆ ಕೋಣೆಯನ್ನು ಒದಗಿಸುವಂತೆ ಸಲ್ಲಿಸಿದ ಮನವಿಗೆ ಸೂಕ್ತವಾಗಿ ಸ್ಪಂಧಿಸಿ,ನಿಮ್ಮ ಮನವಿಯನ್ನು ಪುರಸ್ಕರಿಸಿ ಶೀಘ್ರದಲ್ಲಿಯೆ ತಮಗೆ ಕಾರ್ಯಾಲಯಕ್ಕೆ ಕೋಣೆಗಳ ಒದಗಿಸುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ತಾವು ನಮ್ಮ ಕೆಜೆಯು ಮನವಿಗೆ ಸ್ಪಂಧಿಸಿ ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಮೃತರಾಗಿದ್ದ ಮೂವರು ಪತ್ರಕರ್ತರಿಗೆ ವೈಯಕ್ತಿಕವಾಗಿ ತಲಾ ೫೦ ಸಾವಿರ ರೂಪಾಯಿಗಳ ನೆರವು ನೀಡುವ ಜೊತೆಗೆ ಸರಕಾರದಿಂದಲೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ತಲಾ ಮೂರು ಲಕ್ಷ ರೂಪಾಯಿಗಳ ಪರಿಹಾರ ಕೊಡಿಸುವಲ್ಲಿ ತಾವು ತೋರಿದಿ ಪತ್ರಕರ್ತರೆಡೆಗಿನ ಕಾಳಜಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ನಂತರ ಕೆಜೆಯುನ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೆಜೆಯು ತಾಲೂಕು ಉಪಾಧ್ಯಕ್ಷ ಮಲ್ಲು ಗುಳಗಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಮನಮೋಹನ ಪ್ರತಿಹಸ್ತ ಪುರುಷೋತ್ತಮ ದೇವತ್ಕಲ್ ಕಲೀಂ ಫರೀದಿ ಮುರುಳಿಧರ ಅಂಬುರೆ ಮದನಲಾಲ ಕಟ್ಟಿಮನಿ ಶ್ರೀಮಂತ ಛಲುವಾದಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here