ಕಾಂಗ್ರೆಸ್‌ಗೆ ವಿರೋಧ ಮಾಡುವುದು ಬಿಟ್ಟು ಬೇರೆ ವಿಷಯವೇ ತಿಳಿದಿಲ್ಲ:ಶ್ರೀಶೈಲ್ ಮಾಲಿಪಾಟೀಲ್.

0
42

ಆಳಂದ: ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ಬಿಟ್ಟು ಬೇರೆ ವಿಷಯವೇ ತಿಳಿದಿಲ್ಲ ಎಂದು ನಿಂಬರ್ಗಾ ವಲಯ ಬಿಜೆಪಿ ಮುಖಂಡ ಶ್ರೀಶೈಲ್ ಮಾಲಿಪಾಟೀಲ್ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೆಟ್ರೋಲ್, ಡೀಜೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ವಿರುದ್ಧ ಶ್ರೀಶೈಲ್ ಮಾಲಿಪಾಟೀಲ್ ಕಿಡಿಕಾರಿದ್ದಾರೆ. ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷ ಎಲ್ಲವನ್ನು ವಿರೋಧ ಮಾಡಲು ಆರಂಭಿಸಿದೆ. ಕೆಂದ್ರ ಸರ್ಕಾರ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಅದಕ್ಕೂ ವಿರೋಧ, ಜನಪರ ವ್ಯವಸ್ಥೆಯನ್ನು ಕೈಗೊಂಡಲ್ಲಿ ಅದಕ್ಕೂ ವಿರೋಧ ಮಾಡುತ್ತಿರುವ ಕಾಂಗ್ರೆಸ್ ಇತ್ತೀಚೆಗೆ ಕೋವಿಡ್ ಲಸಿಕೆ ವಿಚಾರದಲ್ಲೂ ದೇಶದಾದ್ಯಂತ ವಿರೋಧ ಮಾಡಿತ್ತು. ಇದೀಗ ಪೆಟ್ರೋಲ್, ಡೀಜೆಲ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆ ಅನಿವಾರ್ಯವಾಗಿ ದೇಶದಲ್ಲೂ ಪೆಟ್ರೋಲ್, ಡೀಜೆಲ್ ಬೆಲೆ ಏರಿಸಭೇಕಾಗಿದೆ. ಈ ಬೆಳವಣಿಗೆ ದೇಶದಲ್ಲಿ ಎಲ್ಲಾ ಪಕ್ಷಗಳ ಆಡಳಿತವಿದ್ದಾಗಲೂ ನಡೆದುಕೊಂಡು ಬಂದಿದೆ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಮೇಲೆ ಮಾಡಿಟ್ಟ ಸಾವಿರಾರು ಕೋಟಿ ಸಾಲದ ಹೋರೆಯನ್ನು ಇಂದು ಮೋದಿ ಸರ್ಕಾರ ತಿರಿಸಿದೆ ಇದು ಕಾಂಗ್ರೆಸ್‌ಗೆ ಕಾಣಲ್ಲ ಎಂದು ಕಿಡಿಕಾರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here