ಸುರಪುರ : ಸೂಗುರೇಶ್ವರ ದೇವಸ್ಥಾನದಲ್ಲಿ ವಿಶ್ವ ಸಂಗೀತ ದಿನಾಚರಣೆ

0
19

ಸುರಪುರ: ನಗರದ ಶೆಟ್ಟಿ ಓಣಿಯ ಸೂಗುರೇಶ್ವರ ದೇವಸ್ಥಾನದಲ್ಲಿ ವಿಶ್ವ ಸಂಗೀತ ದಿನ ನಿಮಿತ್ತ ಸರಳವಾಗಿ ಸಂಗೀತ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಹಿರಿಯ ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ ಅವರು ಮಾತನಾಡಿ
ಜಗತ್ತಿನಲ್ಲಿ ಸಂಗೀತಕ್ಕೆ ತನ್ನದೇ ಆದ ಒಂದು ಶಕ್ತಿ ಇದೆ, ಸಂಗೀತ ಹಾಡುವಿಕೆ ಹಾಗೂ ಆಲಿಸುವದರಿಂದ ಮಾನಸಿಕ ಒತ್ತಡವನ್ನು
ಹೋಗಲಾಡಿಸಬಹುದು ಇದರಿಂದ ಮನಸ್ಸು ಉಲ್ಲಾಸಿತಗೊಂಡು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು
ಹೇಳಿದರು.

ಈ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಶರಣಯ್ಯ ಬಳ್ಳುಂಡಗಿಮಠ,ಸಿದ್ದಯ್ಯ ಬಳ್ಳುಂಡಗಿಮಠ,ಪ್ರಾಣೇಶ ಕುಲಕರ್ಣಿ
ಬೋನಾಳ,ಮಲ್ಲಿಕಾರ್ಜುನ ಸಿಂಗೆ,ಶರಣು ಮಾಲಗತ್ತಿ,ಗುರುನಾಥರೆಡ್ಡಿ ಶೀಲವಂತ,ಕು.ಸಾಕ್ಷಿ,ಪ್ರಿಯಾಂಕ ವಿಶ್ವಕರ್ಮ,ಮನೋಜ್
ವಿಶ್ವಕರ್ಮ,ತಿಮ್ಮಯ್ಯ ಪೋತಲಕರ,ಶ್ರೇಯಸ್ ಪಾಟೀಲ ಗಾನಸುಧೆ ಹರಿಸಿದರು, ಕಲಾವಿದರಾದ ರಾಜಶೇಖರ ಗೆಜ್ಜಿ,ಸುರೇಶ
ಅಂಬೂರೆ,ರಮೇಶ ಕುಲಕರ್ಣಿ ಉಳ್ಳೆಸೂಗುರು,ಉಮೇಶ ಯಾದವ್ ತಬಲಾ ಸಾಥ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here