ಕಲಬುರಗಿ: ನಗರದ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ- ಎನ್ಎಸ್ಎಸ್, ವಾಯ್ಆರ್ಸಿ ಮತ್ತು ಎನ್ಸಿಸಿ ಘಟಕದ ಸಂಯೋಜಿತದಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಕೊವೀಡ್ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದಭದಲ್ಲಿ ಡಿಎಚ್ಓ ಡಾ. ಶರಣಬಸಪ್ಪಾ ಗಣಜಲ್ಖೇಡ್, ಪ್ರಾಚಾರ್ಯ ಡಾ. ಆರ್.ಬಿ. ಕೊಂಡಾ, ಡಾ. ಸುನೀಲಕುಮಾರ, ಡಾ. ಪ್ರಮೋದ, ಡಾ.ಸೌಮ್ಯಶ್ರೀ, ಡಾ. ಮೋಹನರಾಜ್ ಪತ್ತಾರ್, ಉಮಾ ರೇವೂರ, ಡಾ. ಪ್ರವೀಣ ರಾಜೇಸಾಬ್, ರೇಖಾ ಸೇರಿದಂತೆ ಇನ್ನಿತರರು ಇದ್ದರು.