ಪಿಐ ಎಸ್.ಎಮ್.ಪಾಟೀಲ್‌ಗೆ ಸುರಪುರ ಬ್ಯಾಡ್ಮಿಂಟನ್ ಅಶೋಷಿಯೇಶನ್ ಸನ್ಮಾನ

0
16

ಸುರಪುರ: ನಗರದ ಪೊಲೀಸ್ ಠಾಣೆಯಿಂದ ಚಡಚಣ ಪೊಲೀಸ್ ಠಾಣೆಗೆ ವರ್ಗಾಣೆಗೊಂಡಿರುವ ಪಿಐ ಎಸ್.ಎಮ್.ಪಾಟೀಲ್ ಅವರಿಗೆ ಸುರಪುರ ಬ್ಯಾಡ್ಮಿಂಟನ್ ಅಶೋಷಿಯೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆದ ಸನ್ಮಾನ ಸ್ವೀಕರಿಸಿದ ಎಸ್.ಎಮ್.ಪಾಟೀಲ್ ಮಾತನಾಡಿ,ತಾವೆಲ್ಲರು ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಲು ಉತ್ತಮವಾಗಿ ಬೆಂಬಲಿಸಿದ್ದೀರಿ,ಜೊತೆಗೆ ಎಲ್ಲರು ಸ್ನೇಹ ಸಹೋದರತೆಯಿಂದ ಬ್ಯಾಡ್ಮಿಂಟನ್ ಅಶೋಷಿಯೆಶನ್ ಜೊತೆಗೆ ಬೆರೆತು ತಮ್ಮೊಂದಿಗೆ ಆಟವಾಡಲು ನೆರವಾಗಿದ್ದೀರಿ,ತಮ್ಮೆಲ್ಲರೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣಿಯವಾಗಿವೆ,ಇದುವರೆಗು ತಾವು ನೀಡಿದ ಬೆಂಬಲಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಶ್ರೀ ಜನನಿ ಮಹಿಳಾ ಮಹಾವಿದ್ಯಾಲಯದಲ್ಲಿ ಕೊರೊನಾ ಲಸಿಕೆ ಅಭಿಯಾನ

ಇದೇ ಸಂದರ್ಭದಲ್ಲಿ ಅಶೋಷಿಯೇಶನ್‌ನ ಅನೇಕ ಮುಖಂಡರು ಮಾತನಾಡಿ,ಎಸ್.ಎಮ್.ಪಾಟೀಲ್ ಸರ್‌ವರು ನಮ್ಮ ಅಶೋಷಿಯೇಶನ್‌ನ ಗೌರವಾಧ್ಯಕ್ಷರಾಗಿ ನಮ್ಮೊಂದಿಗೆ ಬೆರೆತು ನಿತ್ಯವು ಬ್ಯಾಡ್ಮಿಂಟನ್ ಆಟದ ಜೊತೆಗೆ ಒಬ್ಬ ಹಿರಿಯ ಸಹೋದರರಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿದ್ದು ನಮ್ಮೆಲ್ಲರಲ್ಲಿ ಅಚ್ಚಾಗಿದೆ.ಈಗ ವರ್ಗಾವಣೆಗೊಂಡಿರುವುದು ನಮ್ಮೆಲ್ಲರಲ್ಲಿ ಬೇಸರವನ್ನು ಮೂಡಿಸಿದರು,ಮುಂದೆ ಆದಷ್ಟು ಬೇಗನೆ ಪದೋನ್ನತಿ ಹೊಂದಿ ಮತ್ತೆ ನಮ್ಮ ಸುರಪುರ ಠಾಣೆಗೆ ಬರುವಂತಾಗಲೆಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಎಲ್ಲರು ಶಾಲು ಹೊದಿಸಿ ಸನ್ಮಾನಿಸಿ ಗೌರವಸಿದರು. ಅಶೋಷಿಯೇಶನ್‌ನ ಮುಖಂಡರಾದ ರಾಮನಗೌಡ ಪಾಟೀಲ್,ಸೋಫಿಸಾಬ್ ಪಠಾಣ್,ಡಾ:ಮಲ್ಲಿಕಾರ್ಜುನ ಕಮತಗಿ,ಜಂಬುನಾಥ ಪೂಜಾರಿ,ಸಂದೀಪ್ ನಾಯಕ,ಗಣಪತಿ ಶಟಗಾರ,ಬಸವರಾಜ ಮುದಗಲ್,ಸೋಮಯ್ಯ ಸ್ವಾಮಿ,ಮಹಾಂತೇಶ ಬಿರಾದಾರ್,ಶರಣು ಮಾಲಗತ್ತಿ ಅರಳಗುಂಡಗಿ,ಪರಶುರಾಮ ಕನಕಗಿರಿ ಮತ್ತು ಕೃಷ್ಣಾ ಕಟಾಸ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here