ಕಲಬುರಗಿ: ಮುಂಬರುವ ಜಿ.ಪಂ. ಚುನಾವಣೆಯಲ್ಲಿ ಫರಹತಾಬಾದ ಸಾಮಾನ್ಯ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿಯಾಗಿದ್ದೇನೆ ಎಂದು ಜ್ಯೋತಿ ಮರಗೋಳ ಎಮ್. ಮರಗೋಳ( ಸೋಮನಾಥ ಹಳ್ಳಿ) ಹೇಳಿದರು.
ಫರಹತಾಬಾದ ಜಿ.ಪಂ.ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದಲ್ಲಿ ಹಲವಾರು ರಾಜಕೀಯ ಸಭೆ ಸಮಾರಂಭಗಳಲ್ಲಿ ಚಾಚು ತಪ್ಪದೆ ಭಾಗವಹಿಸಿ ನನ್ನಿಂದಾಷ್ಟು ಸಹಾಯ ಸಹಕಾರ ಮಾಡುತ್ತಾ ಕ್ಷೇತ್ರದ ಜನರ ಮನಸ್ಸಲ್ಲಿ ಮನೆ ಮಗಳಾಗಿದ್ದೆನೆ. ಅದರ ಜೊತೆಗೆ ರಾಜ್ಯ, ಜಿಲ್ಲೆ ಹಾಗೂ ಅಫಜಲಪುರ ತಾಲ್ಲೂಕಿನ ಶಾಸಕರು ಹಾಗೂ ಅವರ ಸುಪುತ್ರ ಅರುಣಕುಮಾರ ಎಂ. ವೈ.ಪಾಟೀಲ ಸೇರಿದಂತೆ ಹಲವಾರು ಹಿರಿಯ ನಾಯಕರ ಜೊತೆಗೆ ಚಿರಪರಿಚಿತಳಾಗಿದ್ದೇನೆ.
ಶಾಸಕರ ನೇತೃತ್ವದಲ್ಲಿ ವರ್ಷದ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ಫರಹತಾಬಾದ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಗ್ರಾಮದ ಜನರಿಗೆ ಕಷ್ಟ ಸುಖದಲ್ಲಿ ಭಾಗಿಯಾಗಿ ನನ್ನಿಂದಾಷ್ಟು ಸಹಾಯ ಮಾಡುವುದರ ಜೊತೆಗೆ ಕರೋನಾ ಎರಡನೇ ಅಲೆಯಲ್ಲಿ ಆಹಾರ ಕಿಟ್ಗಳು ಬಡಜನರಿಗೆ ನೀಡಿದ್ದೇನೆ. ಮೂರು ವರ್ಷದಿಂದ ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾ, ಇಂದಿರಾಗಾಂಧಿ ವೇದಿಕೆ ಜಿಲ್ಲಾಧ್ಯಕ್ಷೆ ಹಾಗೂ ವೀರಶೈವ ಲಿಂಗಾಯತ ಮಹಾಸಭದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೀನಿ ಎಂದು ಮರಗೋಳ ತಿಳಿಸಿದರು.
ನನಗೆ ಫರಹತಾಬಾದ ಮತಕ್ಷೇತ್ರದ ಜಿ. ಪಂ. ಟಿಕೇಟ್ ನೀಡಿ ಆಶಿರ್ವಾದ ಮಾಡಿದರೆ ಗೆಲುವುದರಲ್ಲಿ ಸಂಶಯವಿಲ್ಲ ಎಂದು ಅಫಜಲಪುರ ತಾಲ್ಲೂಕಿನ ಶಾಸಕರಾದ ಎಂ.ವೈ.ಪಾಟೀಲ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರಾದ ಅರುಣಕುಮಾರ ಎಂ. ವೈ.ಪಾಟೀಲ ಸೇರಿದಂತೆ ಹಲವಾರು ಮುಖಂಡರಲ್ಲಿ ಮನವಿ ಮಾಡುವೆ ಎಂದು ಮರಗೋಳ ಪತ್ರಿಕೆಯ ಮೂಲಕ ಮನವಿ ಮಾಡಿದರು.