ಚಿತ್ತಾಪುರ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಬಸವಕಲ್ಯಾಣ ಕ್ಷೇತ್ರದ ನೂತನ ಶಾಸಕ ಶರಣು ಸಲಗರ್ ಅವರಿಗೆ ಬಿಜೆಪಿ ಯುವ ಮುಖಂಡ ವಿಠಲ್ ನಾಯಕ್ ಸನ್ಮಾನಿಸಿದರು.
ಶಾಸಕರಾಗಿ ಪ್ರಥಮವಾಗಿ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಶಾಸಕರನ್ನು ಆತ್ಮೀಯವಾಗಿ ಪಕ್ಷದ ಕಛೇರಿಯಲ್ಲಿ ವಿಠಲ್ ನಾಯಕ್ ಅವರು ಸನ್ಮಾನಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕ ಎಸ್ ಸಿ ಮೋರ್ಚಾದ ಅಧ್ಯಕ್ಷ ರಾಜು ಮುಕ್ಕಣ, ವಾಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣಾ ಯಾರಿ,ಮುಖಂಡರಾದ ಬಸವರಾಜ ಕಿರಣಗಿ,ತಮ್ಮಣ್ಣ ಡಿಗ್ಗಿ,ಮಲ್ಲು ಇಂದೂರ್, ದೌಲತರಾವ ಚಿತ್ತಾಪುರಕರ್ ಸೇರಿದಂತೆ ಅನೇಕರು ಇದ್ದರು.