ಕಲಬುರಗಿ: ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ,ಬಾಬುಜಗಜೀವನರಾಮ ರವರ 35ನೇ ಪುಣ್ಯ ಸ್ಮರಣೆ ಕಾರ್ಯವನ್ನು ನಗರದ ಟೌನ ಹಾಲ್ ಹತ್ತಿರದಲ್ಲಿ ಇರುವ ಬಾಬುಜೀ ರವರ ಪ್ರತಿಮೆಗೆ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಎಸ್,ಪಿ ಮತ್ತು ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ ಸಿ,ಓ ಹಾಗೂ ನಗರದ ಡಿ,ಸಿ,ಪಿ ಮತ್ತು ಸಮಾಜದ ಯುವ ನಾಯಕರಾದ ಮಂಜುನಾಥ ಶ,ನಾಲವಾರಕರ್ ರವರು ಇಂದು ಜುಲೈ,6 ರಂದು ಬೆ-9 ಘಂಟೆಗೆ ಬಾಬುಜೀ ಪ್ರತಿಮೆ ಗೌರವಪೂರ್ವಕವಾಗಿ ನಮನ ಸಲ್ಲಿಸಿದರು.
ಪಾಲಿಕೆ ಆಯುಕ್ತರು ಮಾತನಾಡಿ ಹಸಿರು ಕ್ರಾಂತಿ ಹರಿಕಾರ ಡಾ,ಬಾಬುಜೀ ರವರ ನಡೆದ ದಾರಿಯಲ್ಲಿ ನಾವು ಮತ್ತು ನೀವು ನಡೆಯಬೇಕು ಎಂದು ಹೇಳಿದರು,ಕಲಬುರಗಿ ಜಿಲ್ಲಾ ಎಸ್,ಪಿ ರವರು ಮಾತನಾಡಿ ಬಾಬುಜೀ ರವರ ನೀಡಿ ಸೇವೆಯನ್ನು ಅಪಾರ ಎಂದು ಹೇಳಿದರು, ಸಮಾಜದ ಯುವ ನಾಯಕರಾದ ಮಂಜುನಾಥ ಶ,ನಾಲವಾರಕರ್ ರವರು ಮಾತನಾಡಿ ಬಾಬುಜೀ ರವರ ಪ್ರತಿಮೆ ಸುತ್ತಲೂ ಅಭಿವೃದ್ಧಿಗಾಗಿ ಈಗಾಗಲೇ ಕೆ,ಕೆ,ಆರ್,ಡಿ ವತಿಯಿಂದ ಒಟ್ಟು30,ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ.
ಆದರೇ ಬಾಬುಜೀ ರವರ ಪ್ರತಿಮೆ ಸುತ್ತಲೂ ಅಭಿವೃದ್ಧಿ ಮತ್ತು ಬಯಲು ಸಭಾಗಣ ಮಾಡುವ ಮೂಲಕ ಸಣ್ಣಪುಟ್ಟ ಸಭೆ ಸಮಾರಂಭಗಳು ಆಯೋಜಿಸುವ ಬಗ್ಗೆ ಸಂಪೂರ್ಣ ಅಭಿವೃದ್ಧಿಗಾಗಿ ಒಟ್ಟು-1 ಕೋಟಿ ಅನುದಾನ ಅವಶ್ಯಕತೆ ಇದೆ,ಮುಂದಿನ ದಿನಗಳಲ್ಲಿ ಇನ್ನೂ ಅತಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಬತ್ತಾಯ ಮಾಡಿದರು,