ಕಲಬುರಗಿ: ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಸಿರಾಮಿಕ ಮತ್ತು ಸಿಮೆಂಟ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹಾದೇವಪ್ಪ ಜಿ. ಗಾದಗೆ ಅವರು ತಮ್ಮ ತಾಯಿಯವರಾದ ಶ್ರೀಮತಿ ಚಂದ್ರಮ್ಮಾ ಭೀಮರಾಯ ಗಾದಗೆಯವರ ಸ್ಮರಣಾರ್ಥ ಕೋವಿಡ್ ೧೯ ಸಂದರ್ಭದಲ್ಲಿ ಕಷ್ಟದಲ್ಲಿರುವ ಕಾಲೇಜಿನ ಸುಮಾರು ೧೪೦ ಜನ ದಿನಗೂಲಿ ನೌಕರರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು.
ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೆಟ್ಟಿಯವರು ಮಹಾದೇವಪ್ಪ ಗಾದಗೆಯವರ ಉದಾರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋವಿಡ್ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವುದು ಮಾನವಿಯತೆಗೆ ನೀಡಿದ ಗೌರವ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಡೀನ್ ಡಾ. ಎಸ್. ಆರ್. ಪಾಟೀಲ, ಡಾ. ಶರಣಬಸಪ್ಪ ಬಿ. ಪಾಟೀಲ, ಡಾ. ಬಾಬುರಾವ ಸೇರಿಕಾರ, ಕಲ್ಯಾಣಿ ಎಸ್. ಬಿರಾದಾರ, ರಾಜಶೇಖರ ಉಪಾಸೆ, ಸಂಗಶೆಟ್ಟಿ, ರಾಜಶೇಖರ ಬೇಳಕೇರಿ, ಶಿವಶರಣ ದೇಗಾಂವ್, ಶರಣು ಫುಲಾರಿ ಉಪಸ್ಥಿತರಿದ್ದರು.