ಶಹಾಬಾದ ತಾಲೂಕಿನಲ್ಲಿ ಡೆಂಗ್ಯೂ ಬೀತಿ: ಆತಂಕದಲ್ಲಿ ಜನತೆ

0
384

ಶಹಾಬಾದ: ನಗರದಲ್ಲಿ ಕಳೆದ ವಾರದಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, ಸುಮಾರು 11 ಕ್ಕೂ ಹೆಚ್ಚು ಪ್ರಕರಣದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ನಗರದ ವಿವಿಧ ಪ್ರದೇಶದ ಬಡಾವಣೆಗಳಲ್ಲಿ ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಂಡಿದ್ದು , ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಈಗಾಗಲೇ ನಗರದಲ್ಲಿ ಸುಮಾರು 11 ಜನರಿಗೆ ಡೆಂಗ್ಯೂ ಇರುವ ಬಗ್ಗೆ ಖಾಸಗಿ ಲ್ಯಾಬ್‍ನಿಂದ ತಿಳಿದು ಬಂದಿದೆ.ಅಲ್ಲದೇ ಹೊನಗುಂಟಾ ಗ್ರಾಮದಲ್ಲೂ ಇಬ್ಬರು ಬಾಲಕರಿಗೂ ಡೆಂಗ್ಯೂ ತಗುಲಿರುವ ಬಗ್ಗೆ ಸ್ವತಃ ಪಾಲಕರು ತಿಳಿಸಿದ್ದಾರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.ಅದರಲ್ಲೂ ಚಿಕ್ಕ ಮಕ್ಕಳಿಗೆ ಈ ಮಹಾಮಾರಿ ರೋಗ ಬಂದಿದ್ದು, ಪಾಲಕರಲ್ಲಿ ಭಯದ ವಾತಾವರಣ ಮೂಡಿದೆ. ಇದರಿಂದ ತಾಲೂಕಿನ ಜನತೆಯಲ್ಲಿ ಆತಂಕ ಮನೆಮಾಡಿದೆ. ಕಲಬುರಗಿಯ ಸಂಗಮೇಶ್ವರ ಆಸ್ಪತ್ರೆ, ಯಶೋಧರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

Contact Your\'s Advertisement; 9902492681

ಮಳೆಗಾಲ ಆರಂಭವಾಗಿದ್ದು ಮುಂಜಾಗೃತ ಕ್ರಮವಾಗಿ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಕಡೆ ಗಮನಹರಿಸಬೇಕಾಗಿತ್ತು.ಆದರೆ ಅಧಿಕಾರಿಗಳು ಮಾತ್ರ ಕಸ ವಿಲೇವಾರಿಯನ್ನು ಬಿಟ್ಟರೇ ಚರಂಡಿ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ.ಇದರಿಂದ ಚರಂಡಿಗಳಲ್ಲಿ ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ಎಲ್ಲೆಂದರಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.ನಗರಸಭೆಯ ಅಧಿಕಾರಿಗಳು ಕೂಡಲೇ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ಡೆಂಘೀ ಪೀಡಿತರು ಸರಕಾರಿ ಆಸ್ಪತ್ರೆಯತ್ತ ಮುಖ ಮಾಡದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ನಗರಸಭೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ನಗರದ ವಿವಿಧ ಬಡಾವಣೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಡೆಂಘೀ ಕುರಿತು ಜನರಿಗೆ ತಿಳುವಳಿಕೆ, ಮುಂಜಾಗ್ರತಾ ಕ್ರಮ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ.ಅಲ್ಲದೇ ಡೆಂಗ್ಯೂ ಹರಡದಂತೆ ಸಮರೋಪಾದಿಯಲ್ಲಿಕ್ರಮ ಕೈಗೊಳ್ಳುವದು ಅವಶ್ಯಕವಾಗಿದೆ. ಅಲ್ಲದೇ ಹೊನಗುಂಟಾ ಗ್ರಾಮದಲ್ಲೂ ಎಲ್ಲೆಂದರಲ್ಲಿ ಕೊಳಚೆ ನೀರು ನಿಲ್ಲುತ್ತಿದೆ. ಅದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಕ್ಕೆ ಕಾರಣವಾಗಿದೆ.ಆದ್ದರಿಂದ ಗ್ರಾಪಂ ಪಿಡಿಓ ಅವರು ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈಗಾಗಲೇ ಸಮುದಾಯ ಆರೋಗ್ಯಕ್ಕೆ ಕೇಂದ್ರದಲ್ಲಿ ಸುಮಾರು ನಾಲ್ಕು ಬಾಲಕರಿಗೆ ಡೆಂಗ್ಯೂ ತಗುಲಿರುವ ಬಾಲಕರು ಚಿಕಿತ್ಸೆಗಾಗಿ ಬಂದಿದ್ದರು.ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಪಾಲಕರು ಕರೆದುಕೊಂಡು ಹೋಗಿದ್ದಾರೆ.ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು, ನಗರಸಭೆಯ ಪೌರಾಯುಕ್ತರಿಗೆ ನಗರದ ಬಡಾವಣೆಗಳಲ್ಲಿ ಫಾಗಿಂಗ್ ಮಾಡುವುದು ಹಾಗೂ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ತಿಳಿಸಲಾಗುತ್ತದೆ.- ಡಾ.ಅಬ್ದುಲ್ ರಹೀಮ್ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ

ಶಹಾಬಾದ ನಗರಸಭೆ ಹಾಗೂ ಹೊನಗುಂಟಾ ಗ್ರಾಮದ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆÉ.ಅದು ಮಕ್ಕಳಲ್ಲೇ ಹೆಚ್ಚು ಕಂಡು ಬಂದಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು.ಅಲ್ಲದೇ ಸೊಳ್ಳೆ ನಾಶ ಮಾಡಲು ಕ್ರಮಕೈಗೊಂಡು ಡೆಂಗ್ಯೂ ರೋಗದಿಂದ ಮುಕ್ತಿ ನೀಡಬೇಕು. – ಪೀರಪಾಶಾ ಜಿಲ್ಲಾ ಕಾಂಗ್ರೆಸ್ ವಕ್ತಾರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here