ಬಡ್ತಿ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ನೇಮಕ

0
107

ಶಹಾಬಾದ: ಬಡ್ತಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪಗೌಡ , ಕಲಬುರಗಿ ಜಿಲ್ಲಾ ಬಡ್ತಿ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಮೊಟಗಿ ಅವರ ಸಮ್ಮುಖದಲ್ಲಿ ನಗರದಲ್ಲಿ ಶಹಾಬಾದ ತಾಲೂಕಾ ಬಡ್ತಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ಹೊನಗುಂಟಾ ಸ.ಪ್ರೌ.ಶಾಲೆಯ ಸಹಶಿಕ್ಷಕ ವೆಂಕಟೇಶ.ಬಿ.ಚಿನ್ನೂರ, ಗೌರವಾಧ್ಯಕ್ಷರಾಗಿ ಮರತೂರ ಸ.ಪ್ರೌ.ಶಾಲೆಯ ಸಹಶಿಕ್ಷಕ ಟೀಕಾರಾವ ಮುಂಡರಗಿ, ಉಪಾಧ್ಯಕ್ಷರಾಗಿ ಶಹಾಬಾದ ಸರಕಾರಿ ಕನ್ಯಾ ಪ್ರೌ.ಶಾಲೆಯ ಸಹಶಿಕ್ಷಕಿ ಸುನಂದಾ, ಪ್ರಧಾನ ಕಾರ್ಯದರ್ಶಿಯಾಗಿ ರಾವೂರ ಸ.ಪ್ರೌ.ಶಾಲೆಯ ಸಹಶಿಕ್ಷಕ ಉದಯಕುಮಾರ ಇಂಗಳೆ, ಕೋಶಾಧ್ಯಕ್ಷರಾಗಿ iರತೂರ ಸ.ಪ್ರೌ.ಶಾಲೆಯ ಸಹಶಿಕ್ಷಕ ರಾಜಕುಮಾರ ಹಿರೇಮಠ, ಸಂಘಟನಾ ಕಾರ್ಯದರ್ಶಿಯಾಗಿ ಮಾಲಗತ್ತಿ ಸ.ಪ್ರೌ.ಶಾಲೆಯ ಸಹಶಿಕ್ಷಕಿ ವಿದ್ಯಾವತಿ, ಜಿಲ್ಲಾ ಸಂಘದ ನಾಮ ನಿರ್ದೇಶನ ಸದಸ್ಯರಾಗಿ ಮರತೂರ ಸ.ಪ್ರೌ.ಶಾಲೆಯ ಕುಪೇಂದ್ರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಬಡ್ತಿ ಶಿಕ್ಷಕರ ಸಂಘದ ಜಿಲ್ಲಾ ಕೊಶಾಧ್ಯಕ್ಷ ಶಬ್ಬೀರಮೀಯಾ, ನೌಕರ ಸಂಘದ ಸದಸ್ಯ ಶಿವಲಿಂಗಪ್ಪ ಹೆಬ್ಬಾಳಕರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here