7ನೇ ಆರ್ಥಿಕ ಗಣತಿ ಹಿನ್ನೆಲೆ: ಗಣತಿದಾರರ ಪಟ್ಟಿ ಸಲ್ಲಿಸಲು ಸೂಚನೆ

0
78

ಕಲಬುರಗಿ: ಜಿಲ್ಲೆಯಲ್ಲಿ ೭ನೇ ಆರ್ಥಿಕ ಗಣತಿ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ನೀಡಬೇಕಾಗಿದ್ದು, ಕೂಡಲೆ ಗಣತಿದಾರರ ಪಟ್ಟಿಯನ್ನು ೩ ದಿನದೊಳಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಶರಣಪ್ಪ ಅವರು ಇ-ಆಡಳಿತದ ಕಾಮನ್ ಸರ್ವಿಸ್ ಸೆಂಟರಿನ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಕಿರಣ ಅವರಿಗೆ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ೭ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ಗಣತಿಗೆ ಬೇಕಾದ ಗಣತಿದಾರರು ಮತ್ತು ಮೇಲ್ವಿಚಾರಕರನ್ನು ಕೂಡಲೆ ನೇಮಿಸಿ ಅದರ ಪಟ್ಟಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿಗಳಿಗೆ ಸಲ್ಲಿಸಬೇಕು. ತದನಂತರ ಗಣತಿದಾರರಿಗೆ ಸೂಕ್ತ ತರಬೇತಿ ನೀಡಿ ಗಣತಿಗೆ ಅಣಿ ಮಾಡಬೇಕು ಎಂದರು.

Contact Your\'s Advertisement; 9902492681

ಸ್ವಂತ ಉಪಯೋಗಕಲ್ಲದ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮ, ಘಟಕಗಳ ಸಂಪೂರ್ಣ ಚಿತ್ರಣ ಪಡೆಯುವುದೆ ಆರ್ಥಿಕ ಗಣತಿಯ ಮುಖ್ಯ ಉದೇಶವಾಗಿರುತ್ತದೆ. ಈ ಗಣತಿಯಲ್ಲಿ ಬ್ಲಾಕ್ ವಾರು ಪ್ರತಿ ಮನೆ-ಮನೆಗೂ ಗಣತಿದಾರರು ಬೇಟಿ ಕೊಟ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಇಲ್ಲಿ ಸಂಗ್ರಹಿಸುವ ಮಾಹಿತಿ ದೇಶದ ಪ್ರಗತಿಗೆ, ರಾಷ್ಟ್ರೀಯ ತಲಾ ಅದಾಯ ಮತ್ತು ಜಿಡಿಪಿಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ನಿಖರ ಮಾಹಿತಿಯನ್ನು ನಿಗಧಿಯ ಅವಧಿಯೊಳಗೆ ಸಂಗ್ರಹಿಸಬೇಕು ಎಂದು ಸಿಎಸ್‌ಸಿ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

೭ನೇ ಆರ್ಥಿಕ ಗಣತಿಯು ಇ.ಆಡಳಿತದ ಕಾಮನ್ ಸರ್ವಿಸ್ ಸೆಂಟರ್‌ನಿಂದ ಪ್ರಥಮ ಹಂತದ ಕ್ಷೇತ್ರ ಸಮೀಕ್ಷೆ ನಡೆಸಲಾಗುತ್ತದೆ. ಮಾಹಿತಿ ಸಂಗ್ರಹಣೆ ನಂತರ ಪುನರ್ ಪರಿಶೀಲಿಸುವ ಎರಡಣೆ ಹಂತದ ಜವಾಬ್ದಾರಿ ಅಂಕಿ-ಸಂಖ್ಯಾ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಗಣತಿ ಕಾರ್ಯ ಸುಗಮವಾಗಿ ಜರುಗಲು ಜಲ್ಲಾ ಸಮನ್ವಯ ಸಮಿತಿಯ ಎಲ್ಲಾ ಸದಸ್ಯರು ಸಿ.ಎಸ್.ಸಿ. ಸಂಸ್ಥೆಗೆ ಅಗತ್ಯ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಸುವರ್ಣಾ ಮಾತನಾಡಿ ಇದುವರೆಗೆ ದೇಶದಲ್ಲಿ ೬ ಆರ್ಥಿಕ ಗಣತಿ ಕಾರ್ಯ ನಡೆದಿದ್ದು, ಪ್ರಸ್ತುತ ೭ನೇ ಆರ್ಥಿಕ ಗಣತಿಯಾಗಿದೆ. ಈ ಗಣತಿಯಲ್ಲಿ ಮೋಬೈಲ್ ಆಪ್ ಮೂಲಕವೇ ಮಾಹಿತಿ ಸಂಗ್ರಹಣೆ ಮಾಡುತ್ತಿರುವುದು ವಿಶೇಷವಾಗಿದೆ. ೨೦೧೨-೧೩ನೇ ಸಾಲಿನಲ್ಲಿ ನಡೆಸಲಾದ ೬ನೇ ಆರ್ಥಿಕ ಗಣತಿಯಲ್ಲಿ ಕನಿಷ್ಟ ೧೨೦೦ ಗಣತಿದಾರರು ಮತ್ತು ೭೦೦ ಮೇಲ್ವಿಚಾರಕರನ್ನು ಗಣತಿಗೆ ಬಳಸಿಕೊಳ್ಳಲಾಗಿತ್ತು. ಅಷ್ಟು ಸಂಖ್ಯೆಯ ಸಿಬ್ಬಂದಿಯನ್ನು ಈ ಬಾರಿಯು ನೇಮಿಸುವ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೇಷನ್ (ಎನ್.ಎಸ್.ಎಸ್.ಓ) ಜಿಲ್ಲಾ ಅಧೀಕ್ಷಕ ಮಹಾದೇವಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಘೋಜಿ, ಜಿಲ್ಲಾ ಪಂಚಾಯತಿಯ ಡಿ.ಆರ್.ಡಿ.ಎ. ಯೋಜನಾ ನಿರ್ದೇಶಕಿ ಪ್ರವೀಣ ಪ್ರಿಯಾ, ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಕಿರಣ, ಡಿಹೆಚ್‌ಓ ಡಾ.ಮಾಧವರಾವ ಕೆ.ಪಾಟೀಲ, ಡಿಡಿಪಿಐ ಶಾಂತಗೌಡ ಪಾಟೀಲ, ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here