ಕಲಬುರಗಿ ವಿಧಾನ ಸೌಧದ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪನೆಗೆ ಉಸ್ತುವಾರಿ ಸಚಿವರಿಗೆ ಮನವಿ

0
14

ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಕಲಬುರಗಿ ನಗರಕ್ಕೆ ಆಗಮಿಸಿದ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣೆಗೆ ಒಕ್ಕೂಟ ನಿಯೋಗ ಭೇಟಿ “ಕಲಬುರಗಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ರವರ ಮತಾನಾಡಿ, ಈಗಾಗಲೇ 7ಅಡಿಯಿಂದ 9 ಅಡಿಯವರೆಗೆ ಪ್ರತಿಮೆಗಳು ನಿರ್ಮಾಣಗೊಂಡಿವೆ, ನಗರದ ಮಿನಿ ವಿಧಾನ ಸೌಧದ. ಮುಂಭಾಗದಲ್ಲಿ ಉದ್ಯಾನವನದಲ್ಲಿ ಎತ್ತರವಾದ ಪ್ರತಿಮೆ ನಿರ್ಮಾಣಗೊಳಿಸುವ ಮೂಲಕ ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಲ್ಲಿಸಬೇಕಾಗಿ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಚಿನ ಫರಹತಾಬಾದ, ಸಂಪತ್ ಹೀರೆಮಠ, ದತ್ತು ಅಯ್ಯಳಕರ್,ಶರಣು ಹೋಸಮನಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here