ರಾಜುಗೌಡರಿಗೆ ಸಚಿವ ಸ್ಥಾನ ನೀಡಿ: ಎಪಿಎಂಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೆರಾ ಮನವಿ

0
11

ಸುರಪುರ: ಮುಂಬರುವ ಸಚಿವ ಸಂಪುಟದಲ್ಲಿ ನಮ್ಮ ಸುರಪುರ ಕ್ಷೇತ್ರದ ಶಾಸಕರು ಹಾಗು ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಎಪಿಎಂಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೆರಾ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿರುವ ಅವರು,ನಮ್ಮ ಶಾಸಕರಾದ ರಾಜುಗೌಡ ಅವರು ಈ ಹಿಂದೆ ಸಣ್ಣ ಕೈಗಾರಿಕೆ ಸಚಿವರಾಗಿ ಅನೇಕ ಅಭೀವೃಧ್ಧಿ ಪರವಾದ ಯೋಜನೆಗಳ ಮೂಲಕ ರಾಜ್ಯದ ಜನರ ಮನದಲ್ಲಿ ಉಳಿದಿದ್ದಾರೆ.ಅಲ್ಲದೆ ಸದ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ.

Contact Your\'s Advertisement; 9902492681

ಜೊತೆಗೆ ಭಾರತಿಯ ಜನತಾ ಪಕ್ಷದ ಬೆಳೆವಣಿಗೆಯಲ್ಲಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮುಖ್ಯವಾಗಿ ಇಡೀ ಸುರಪುರ ಮತಕ್ಷೇತ್ರದ ಜನರ ಮನದಲ್ಲಿ ಉಳಿದುಕೊಳ್ಳುವಂತೆ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಎರಗಿರುವ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನ ಜಾಗೃತಿ ಮೂಡಿಸುವ ಜೊತೆಗೆ ಜನರಿಗೆ ಅನೇಕ ರೀತಿಯಲ್ಲಿ ನೆರವಾಗುವ ಮೂಲಕ ರಾಜ್ಯದಲ್ಲಿಯೇ ತಮ್ಮದೆ ಆದ ಹೆಸರುಗಳಿಸಿದ್ದಾರೆ.

ಇಂತಹ ಮಹಾನ್ ನಾಯಕರಾದ ನಮ್ಮ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಸುರಪುರ ತಾಲೂಕಿನ ಜನತೆ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here