ವೀರಶೈವ ಲಿಂಗಾಯತ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ

0
9

ಕಲಬುರಗಿ: ನೂತನ ಸಚಿವ ಸಂಪುಟ ರಚನೆಯಲ್ಲಿ ಕಲಬುರಗಿ ಜಿಲ್ಲೆಯ ವೀರಶೈವ ಲಿಂಗಾಯತ  ಸಮಾಜದ ಶಾಸಕರಿಗೆ  ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.

ನಗರದ ಸರ್ದಾರ ಪಟೇಲ ವೃತ್ತದಲ್ಲಿ ಪ್ರತಿ ಭಟನಾ ಪ್ರದರ್ಶನ ಕೈಗೊಂಡು, ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಶಾಸಕರಿಗೆ  ಸಚಿವ  ಸ್ಥಾನ ಮತ್ತು ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಲಾಯಿತು. ವೇದಿಕೆಯ ಬೇಡಿಕೆಯನ್ನು ಕಡೆಗಣಿಸಿದ್ದಲ್ಲಿ,  ಬೀದಿಗಿಳಿದು ಉಗ್ರ ಹೋರಾಟ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳಿಗೆ  ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಲಾಯಿತು.

Contact Your\'s Advertisement; 9902492681

ಈ ಪ್ರತಿ ಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ನೀಲೂರ, ಶ್ರೀಧರ ನಾಗನಳ್ಳಿ, ಕ ಲ್ಯಾಣರಾವ ಪಾಟೀಲ ಕಣ್ಣಿ, ಮಹೇಶ ಕಣ್ಣಿ, ಸುನೀಲ ಮಹಾಗಾಂವಕರ್, ಸತೀಶ ಮೊಹನ, ಗುರುರಾಜ ಅಂಖಾಡಿ, ಶಾಂತು ರೇವೂರ ಸೇರಿದಂತೆ ಸಮಾಜದ ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here