ಜೆಡಿಎಸ್‌ದಿಂದ ಜಫ್ರುಲ್ಲಾ ಖಾನ್ ಜನ್ಮ ದಿನ ಆಚರಣೆ

0
70

ಶಹಾಬಾದ: ಜಫ್ರುಲ್ಲಾ ಖಾನ್ ಅವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಸಮಾಜ ಸೇವೆಯ ಮೂಲಕವೇ ಗುರುತಿಸಿಕೊಳ್ಳುವ ವಿಶಿ? ರಾಜಕಾರಣಿಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಮಹ್ಮದ್ ಅಜರೋದ್ದಿನ್ ಹೇಳಿದರು.

ಅವರು ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರ ಜನ್ಮ ದಿದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರುಅವರು ತಮ್ಮ ಸಮಾಜ ಸೇವೆಯ ಮೂಲಕವೇ ಗುರುತಿಸಿಕೊಂಡಿರುವ ಜಫ್ರುಲ್ಲಾ ಖಾನ್ ಯಾವುದೇ ಧರ್ಮ, ಜಾತಿ, ನೋಡದೆ ಎಲ್ಲಾ ವರ್ಗದ ಜನರಿಗೂ ಕೋವಿಡ್ ಸಂದರ್ಭದಲ್ಲಿ ನೆರವು ನೀಡಿರುವುದು ಅತ್ಯಂತ ಶ್ಲಾಘನೀಯ ಕೆಲಸ.ಅವರ ಸೇವಾ ಮನೋಭಾವನೆ ನಮ್ಮೆಲ್ಲರಲ್ಲಿ ಕಿಂಚಿತ್ತಾದರೂ ಬರಲಿ ಎಂಬುದೇ ನಮ್ಮೆಲ್ಲರ ಆಶಯ ಎಂದರು.

Contact Your\'s Advertisement; 9902492681

ಮಹ್ಮದ್ ಉಬೆದುಲ್ಲಾ ಮಾತನಾಡಿ, ಲಾಕ್?ಡೌನ್? ಸಂಕ?ದಲ್ಲಿ ಸಿಲುಕಿ ಪರದಾಡುತ್ತಿರುವ ಬಡ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮುಂದೆ ಬಂದಿದ್ದು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಫ್ರುಲ್ಲಾ ಖಾನ್ ತಮ್ಮ ಹೆಂಡತಿಯ ಫಾಮ್ ಫೌಂಡೇಶನ್ ಮೂಲಕ ಬಡ ಜನರಿಗೆ ನೆರವು ನೀಡಿ ಸಾರ್ಥಕ ಬದುಕನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ, ಶೇಖ ಚಾಂದ ವಾಹೀದಿ, ಬಸವರಾಜ ಮಯೂರ, ಸುನೀಲ ಚವ್ಹಾಣ, ಹೀರಾಲಾಲ ಪವಾರ, ಸುಭಾನ, ಶೇಖ ಬಸಿರೊದ್ದಿನ್, ಮಹ್ಮದ್ ಇಮ್ರಾನ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here