ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪನವರಿಗೆ ಮನವಿ

0
176

ಶಹಾಬಾದ: ನಗರದ ಬಿಜೆಪಿ ಮುಖಂಡರ ನಿಯೋಗವು ಮಂಗಳವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೇಟಿ ಮಾಡಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಪ್ರಥಮಬಾರಿ ಶಾಸಕರಾಗುವ ಮೂಲಕ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಹೊಂದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡಿ ಮತದಾರರಿಂದ ಸೈ ಎನಿಸಿಕೊಂಡಿದ್ದಾರೆ. ಕಲಬುರಗಿಯ ಜಿಲ್ಲೆಯಾಧ್ಯಂತ ಯುವಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.ಮಹಿಳೆಯರನ್ನು, ಹಿರಿಯರನ್ನು, ಯುವಕರನ್ನು ಸೆಳೆಯುವ ಮೂಲಕ ಬಿಜೆಪಿಯನ್ನು ಬಲಿಷ್ಠಗೊಳಿಸಿದ್ದಾರೆ.ಹೀಗಾಗಿ ಯುವಕರಾದ ಬಸವರಾಜ ಮತ್ತಿಮಡು ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಅಲ್ಲದೇ ನಿಯೋಗ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೂ ಬೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನಕಪ್ಪ ದಂಡಗುಲಕರ್,ನಿಂಗಣ್ಣ ಹುಳಗೋಳಕರ್,ಶಿವುಗೌಡ, ಅಣ್ಣಪ್ಪ ದಸ್ತಾಪೂರ, ಬಸವರಾಜ ಮದ್ರಿಕಿ, ಡಿ.ಸಿ.ಹೊಸಮನಿ, ಸದಾನಂದ ಕುಂಬಾರ,ವಿರೇಶ ಬಂದಳ್ಳಿ, ಕಾಶಪ್ಪ ಚನ್ನೂರ,ಬಸವರಾಜ ತರನಳ್ಳಿ,ಮಹಾದೇವ ಗೊಬ್ಬೂರಕರ್, ಭೀಮಯ್ಯ ಗುತ್ತೆದಾರ, ಸಂಜಯ ಸೂಡಿ, ಬಸವರಾಜ ಬಿರಾದಾರ, ದೇವೆಂದ್ರಪ್ಪ ಯಲಗೋಡಕರ್,ಜಗದೇವ ಸುಬೇದಾರ, ಚಂದ್ರಕಾಂತ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here