ಸುರೇಶ್ ಜೋಗೂರ್ ವೀರಶೈವ ಮಹಾಸಭೆಯ ಸದಸ್ಯರೇ ಅಲ್ಲ: ನರಿಬೋಳ್

0
171

ಕಲಬುರಗಿ: ನನಗೆ ಅಖಿಲ ಭಾರತ ವೀರಶೈವ ಮಹಾಸಭೆಯಿಂದ ಉಚ್ಛಾಟಿಸುವ ಬೆದರಿಕೆ ಹಾಕಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಜೋಗೂರ್ ಅವರು ಮಹಾಸಭೆಯ ಸದಸ್ಯತ್ವವನ್ನೇ ಪಡೆದಿಲ್ಲ ಎಂದು ಮಹಾಸಭೆಯ ಸದಸ್ಯ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುರೇಶ್ ಜೋಗೂರ್ ಅವರು ನನಗೆ ಉಚ್ಛಾಟನೆ ಮಾಡುವ ಕುರಿತು ಹೇಳಿಕೆ ನೀಡಿದ್ದು, ಆ ಕುರಿತು ಮಹಾಸಭೆಯ ಕೇಂದ್ರ ಸಮಿತಿಯವರಿಗೆ ಕೇಳಿದಾಗ, ಜೋಗೂರ್ ಅವರು ಮಹಾಸಭೆಯ ಸದಸ್ಯತ್ವವನ್ನೇ ಪಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದರು.

ಮಹಾಸಭೆಯ ಸದಸ್ಯರಲ್ಲದವರನ್ನು ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರ ಹಿಂದೆಯೂ ಸಹ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದ ಅವರು, ಜಿಲ್ಲಾ ಘಟಕದ ಪದಾಧಿಕಾರಿಗಳ ಅವಧಿ ಮುಗಿದರೂ ಸಹ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಹಾಗೂ ಡಾ. ಶ್ರೀಶೈಲ್ ಘೂಳಿ ಅವರು ಮಹಾಸಭೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಬೇಕು ಎಂಬ ನನ್ನ ಆಗ್ರಹಕ್ಕೆ ನಾನು ಬದ್ಧ ಇರುವೆ. ಇಲ್ಲವಾದಲ್ಲಿ ಹೋರಾಟವನ್ನು ಕೈಗೊಳ್ಳುವೆ ಎಂದು ಅವರು ಪುನರುಚ್ಛರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here