ಮರಗಳು ಜೀವಜಾಲದ ಜೀವಾಳಗಳು: ದೇವೇಂದ್ರಪ್ಪ

0
33

ಬೀದರ್: ಮರಗಳು ಜೀವ ಜಾಲದ ಜೀವಾಳಗಳು ಎಂದು ಡಯಟ್ ಉಪನ್ಯಾಸಕ ದೇವೇಂದ್ರಪ್ಪ ಅವರು ಇಲ್ಲಿ ಹೇಳಿದರು.

ತಾಲ್ಲೂಕಿನ ಯದಲಾಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಕೋರ್ ವಿಜ್ಞಾನ ಚಟುವಟಿಕಾ ಕಲಿಕಾ ಕೇಂದ್ರ ಹಾಗೂ ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ “ವನಮಹೋತ್ಸವ” ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮರಗಳು ಇಡೀ ಜೀವಿ ಸಮುದಾಯಕ್ಕೆ ಉಸಿರಾಗಿವೆ. ಅರಣ್ಯಗಳು, ಮರಗಿಡಗಳು ಪರಿಸರದ ಚಕ್ರದಲ್ಲಿ ತಮ್ಮದೇ ಆದ ಅತೀ ಮಹತ್ವದ ಪಾತ್ರ ನಿರ್ವಹಿಸುತ್ತವೆ.

Contact Your\'s Advertisement; 9902492681

ಎಲ್ಲಾ ಮಕ್ಕಳು ಶಾಲೆಯಲ್ಲಿ ಮನೆಯಂಗಳದಲ್ಲಿ ಕನಿಷ್ಠ ಎರಡು ಗಿರಮರಗಳನ್ನು ನೆಟ್ಟು ಪ್ರತಿನಿತ್ಯ ಅವುಗಳಿಗೆ ನೀರುಣಿಸುವ ಹವ್ಯಾಸವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಮತ್ತು ಶಾಲೆಯಲ್ಲಿ ಮರಗಳನ್ನು ನೆಟ್ಟು ಒಳ್ಳೆಯ ವಾತಾವರಣ ಬೆಳೆಸಬೇಕು. ಹಾಗೂ ಪರಿಸರ ಸಂರಕ್ಷಣೆ ಮಾಡಿ ಸುಸ್ಥಿರ ಭವಿಷ್ಯಕ್ಕಾಗಿ ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ಭೂಮಿಯ ಮೇಲೆ ಹಸಿರು ಹೊದಿಕೆ ಹೆಚ್ಚಿಸಲು ಪ್ರಯತ್ನ ಮಾಡಬೇಕು ಎಂದರು.

ಶಿಕ್ಷಕಿ ಭಾನುಪ್ರಿಯ ಅರಳಿಯವರ ಮಾರ್ಗದರ್ಶನದಲ್ಲಿ ಮಕ್ಕಳು ಪ್ರಾರ್ಥನಾ ಗೀತೆಯನ್ನು ಬಹಳ ಸುಂದರವಾಗಿ ನಡೆಸಿಕೊಟ್ಟರು. ಸಂತೋಷ್ ಬಿರಾದಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಪಾಠಕ್ ಅವರು ಸ್ವಾಗತಿಸಿದರು. ಜಗನ್ನಾಥರೆಡ್ಡಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಯೋತಿ, ಶ್ರೀಮತಿ ಮೀರಾ, ಶ್ರೀಮತಿ ಈಶ್ವರಿ, ಸಂತೋಷ್ ಬಿರಾದಾರ್, ಮನೋಹರಸಿಂಗ್ ಪಾಟೀಲ್ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here