ನಕಲಿ ಹೆಸರು ಬೀಜ ಮಾರಟ: ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಲು ಗುತ್ತೇದಾರ ಆಗ್ರಹ

0
26

ಸೇಡಂ : ನಕಲಿ ಹೆಸರು ಬೀಜ ಮಾರಟ ಮಾಡಿದ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.

ಮಳಖೇಡ ಗ್ರಾಮದ ರಾಜು ನಂದೂರ ಅವರ ಹೊಲಕ್ಕೆ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಭೇಟಿ ನೀಡಿ ಬೇಳೆ ವೀಕ್ಷಿಸಿ ಮಾತನಾಡಿದ ಅವರು ನಕಲಿ ಹೆಸರು, ಬಿಜ ಮಾರಾಟ ಮಾಡಿದ ವ್ಯಕ್ತಿಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯಕೊಳ್ಳಗಾದ ರೈತರಿಗೆ ಪ್ರತಿ ಪರಿಹಾರ ನೀಡಬೇಕು, ಮಳಖೇಡ ಮತ್ತು ಸುತ್ತಲಿನ ಗ್ರಾಮದ ರೈತರ ಸಾವಿರಾರು ಎಕರೆ ಜಮೀನಿನಲ್ಲಿ ಎದೆ ಎತ್ತರ ಬೆಳೆದ ಹೆಸರು ಪೈರಿಗೆ 60 ದಿನಗಳು ಗತಿಸಿದ್ದರೂ ಹೂವುಇಲ್ಲ, ಮೊಗ್ಗು ಇಲ್ಲ, ಕಾಯಿಯೂ ಇಲ್ಲ ಅಪಾರ ಖರ್ಚು ಮಾಡಿ ಬಿತ್ತಿ, ಪೋಷಣೆ ಮಾಡಿದರೂ ಪ್ರಯೋಜನವಾಗಿಲ್ಲ , ರೈತರು ಕಂಗಾಲಾಗಿದ್ದಾರೆ.

Contact Your\'s Advertisement; 9902492681

ತಕ್ಷಣವೇ ರೈತರಿಗೆ ಮೋಸಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅನ್ಯಾಯಕೊಳ್ಳಗಾದ ರೈತರಿಗೆ ಸರಕಾರದ ವತಿಯಿಂದ ಪ್ರತಿ ಎಕರೆಗೆ 20 ಸಾವಿರ ನೀಡಬೇಕು ಎಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ರಾಜಪ್ಪಾ ಮಂಗಾ, ನಾಗರಾಜ ಮಂಗಾ, ದೇವರಾಜ ಮಾಳಗಿ, ಖತಲಪ್ಪ ಲಂಗೋಟಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here