ಬ್ರಹ್ಮ ಶ್ರೀನಾರಾಯಣ ಗುರುಗಳ ತತ್ವಾದರ್ಶ ದಾರಿದೀಪ

0
9

ಆಳಂದ: ಬ್ರಹ್ಮ ಶ್ರೀನಾರಾಯಣ ಗುರುಗಳು ಬದುಕಿನ್ನುದ್ದಕ್ಕೂ ಸಮಾಜದ ಒರೆಕೊರೆಗಳನ್ನು ತಿದ್ದುವ ಮೂಲಕ ಸಮಾಜಕ್ಕೆ ನೀಡದ ಆದರ್ಶ ತತ್ವಗಳು ಇಂದು ದಾರಿದೀಪವಾಗಿವೆ. ಅವರ ಹಾಕಿಕೊಟ್ಟ ಮಾರ್ಗ ತತ್ವಗಳನ್ನು ಆಚರಣೆಗೆ ತರಬೇಕಾಗಿದೆ ಎಂದು ಈಡಿಗ ಸಮಾಜದ ಹಿರಿಯ ಮುಖಂಡ ಹುಚ್ಚಯ್ಯಾ ಗುತ್ತೇದಾರ ಅವರು ಹೇಳಿದರು.

ತಾಲೂಕಿನ ಕೊಡಲಹಂಗರಗಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾರಾಯಣಗುರುಗಳು ತಮಗಾಗಿ ಜೀವಿಸದೆ ಜನಕಲ್ಯಾಣಕ್ಕಾಗಿ ಶ್ರೀಮಿಸಿದ್ದಾರೆ ಎಂದರು.

Contact Your\'s Advertisement; 9902492681

ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಆರ್. ಗುತ್ತೇದಾರ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಸದಸ್ಯ ರಾಜು ಕಾಂದೆ, ಸಂಗೀತಾ ಜಾಧವ, ವೈಜನಾಥ ಬನಶೆಟ್ಟಿ, ಈಡಿಗ ಸಮಾಜದ ಉಮೇಶ ಗುತ್ತೇದಾರ, ಯುವ ಮುಖಂಡ ಕಿರಣ ಗುತ್ತೇದಾರ, ರಾಮಯ್ಯ ಗುತ್ತೇದಾರ, ಲಚ್ಚುಮಯ್ಯ ಗುತ್ತೇದಾರ, ಶಾಂತಪ್ಪ ಗುತ್ತೇದಾರ, ರಾಜು ಗುತ್ತೇದಾರ, ಅನಿಲ ಗುತ್ತೇದಾರ, ಸಾಬಯ್ಯಾ ಗುತ್ತೇದಾರ, ಕುಪೇಂದ್ರ ಗುತ್ತೇದಾರ, ಸಿಬ್ಬಂದಿ ಶರಣಪ್ಪ ಪೂಜಾರಿ, ಬಾಬು ನಡಗೇರಿ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here