ಕಲ್ಯಾಣ ಕರ್ನಾಟಕ ಉತ್ಸವ 18 ರಂದು ಆಚರಿಸಲು ಆಗ್ರಹ

0
93

ಕಲಬುರಗಿ:”ಕಲ್ಯಾಣ ಕರ್ನಾಟಕ ಉತ್ಸವ” ವನ್ನು ಸೆಪ್ಟೆಂಬರ್ “18” ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು “ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ” ಜಂಟಿ ಯಾಗಿ ಆಗ್ರಹಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕ.ಕ.ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ, ನ್ಯಾಯವಾದಿ ಜೆ. ವಿನೋದ ಕುಮಾರ  ಈ ಹಿಂದೆ ಮಾನ್ಯ ಜೆ. ಮಾದುಸ್ವಾಮಿ ಯವರು ಕಾನೂನು ಮಂತ್ರಿಗಳಾಗಿ, ಮೊದಲ ಬಾರಿ ಮಂತ್ರಿಯಾಗಿ ಕಲಬುರಗಿಗೆ KAT ಪೀಠ ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿಕೊಂಡು ಎರಡು ವರ್ಷಗಳಾದರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಯನ್ನು 1998 ರಲ್ಲಿ ಸಚಿವ ಸಂಪುಟ ದಲ್ಲಿ ತೆಗೆದುಕೊಂಡ ನಿರ್ಣಯ ವನ್ನು ನೈಜ ಸಂಗತಿಗಳನ್ನು ಪರಿಗಣಿಸಿ, ಸತ್ಯಾಸತ್ಯತೆಯನ್ನು ಕಾನೂನಾತ್ಮಕ ವಾಗಿ ಸರಿಪಡಿಸಿ, ತಿದ್ದುಪಡಿಗೊಳಿಸಿ ಈ ಭಾಗದ ತಪ್ಪು ಆಚರಣೆಯ ದಿನವನ್ನು ಮರು ನಿಗದಿಗೊಳಿಸಿ ಆಚರಿಸುವ ಬಗ್ಗೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಭಾಗಕ್ಕೆ ಅನ್ಯಾಯ ಎಸಗಿದ್ದಾರೆ ಅಲ್ಲದೆ ನಮ್ಮ ಮನವಿಗೆ ಉತ್ತರ ಕೂಡಾ ನೀಡದೆ ನಮ್ಮ ಭಾವನೆಗಳಿಗೆ ಅಪಮಾನ ಗೊಳಿಸಿದ್ದಾರೆ ಎಂದು ಈ ಭಾಗದ ಯುವಜನ ಒಕ್ಕೂಟದ ವಿಭಾಗೀಯ ಸಂಚಾಲಕ, ಉದಯಕುಮಾರ್ ಜೇವರ್ಗಿ, ಕಾರ್ಯಾಧ್ಯಕ್ಷ ಭೀಮ ರಾವ ಜಿರಗಿ, ಅಧ್ಯಕ್ಷ ಅನಂತ. ಜಿ. ಗುಡಿ ಹಾಗೂ ರಾಜ್ಯ ಸಂಚಾಲಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here