ಅಖಿಲ ಭಾರತೀಯ ಕೋಳಿ ಸಮಾಜದ ನೂತನ ಅಧ್ಯಕ್ಷ ದತ್ತಾತ್ರೇಯ ರೆಡ್ಡಿಗೆ ಸನ್ಮಾನ

0
72

ಕಲಬುರಗಿ: ನಗರಕ್ಕೆ ಆಗಮಿಸಿದ ಅಖಿಲ ಭಾರತೀಯ ಕೋಳಿ ಸಮಾಜದ ನೂತನವಾಗಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ದತ್ತಾತ್ರೇಯ ರೆಡ್ಡಿ ಅವರಿಗೆ ಜಿಲ್ಲೆಯ ನಿವೃತ್ತ ನೌಕರ ಸಂಘ, ನೌಕರ ಸಂಘ, ಅಖಿಲ ಭಾರತೀಯ ಕೋಳಿ ಸಮಾಜದ ಯುವಕರ ಸಂಘದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಗಿತ್ತು.

ಈ ಸಮಯದಲ್ಲಿ ಅಖಿಲಭಾರತೀಯ ಕೋಳಿ ಸಮಾಜದ ರಾಷ್ಟ್ರೀಯ ಸಂಘಟಕರಾದ ಶಿವಲಿಂಗಪ್ಪ ಕಿನ್ನೂರ್ ರವರು ಮಾತನಾಡಿ ಸಮಾಜದ ಸಂಘಟನೆಯ ಬಲವರ್ಧನೆಗಾಗಿ ಅತಿ ಹೆಚ್ಚು ಜಿಲ್ಲಾ ಹಾಗೂ ತಾಲೂಕುವಾರು ಸಮಿತಿಗಳನ್ನು ರಚಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ನೂತನವಾಗಿ ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಅವರು ಮಾತನಾಡಿ ಸಮಾಜದ ಟೋಕರೆ ಕೋಳಿ ಹಾಗೂ ಪರಿವಾರ ತಳವಾರ್ ಎಸ್ಟಿ ಪ್ರಮಾಣಪತ್ರವನ್ನು ಆದಷ್ಟು ಬೇಗ ಸಮಾಜಕ್ಕೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ಜಮಾದಾರ, ಅಮೃತ ಮಾಲಿಪಾಟೀಲ್, ರಾಜೇಂದ್ರ ಚಿಂಚೋಳ್ಳಿ, ಮಡಿವಾಳಪ್ಪ ನರಿಬೋಳ, ಡಾ: ರಾಜ ದೇವೇಂದ್ರಪ್ಪ ಶಾಪುರ್, ಸೋಮರಾಯ ನಾಗಾವಿ, ದೇವೇಂದ್ರ ಚಿಗರಹಳ್ಳಿ, ಚಂದ್ರಶೇಖರ ಫಿರೋಜಾಬಾದ, ಪರಶುರಾಮ ಹಂಚನಾಳ, ನಾಗರಾಜ ಸುರಪೂರ, ಪಿಡ್ಡಪ್ಪ ಜಾಲಗಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here