ಸುರಪುರ: ಏಕದಂತ ಯುವಕ ಮಂಡಳಿ ಅರಳಿಕಟ್ಟಿ ವತಿಯಿಂದ ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ೯ನೇ ವರ್ಷದ ಗಣೇಶ ಉತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಂಡಳಿ ಹಾಗು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೊರೊನಾ ಮೂರನೇ ಅಲೆಯ ವಿರುದ್ಧ ಜಯಸಾಧಿಸುವ ಗುರಿಯೊಂದಿಗೆ ಸಾರ್ವಜನಿಕರಿಗೆ ಕೊರೊನಾ ಲಸಿಕಾ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು ಮತ್ತು ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷ ಸ್ವರೂಪ ಬೂದಿಹಾಳ,ಸಚೀನ ಗದ್ವಾಲ,ಸುಶಾಂತ್ ಜಾಕಾ,ಸುಪ್ರೀತ್ ಬೂದಿಹಾಳ,ಸಂತೋಷ,ವಿರೇಶ ಗುಮ್ಮಾ,ಹಣಮಂತ ದೊರೆ ಸೇರಿದಂತೆ ಅನೇಕರಿದ್ದರು.