ತೀವ್ರ ನೋವಿನಿಂದ ಬಳಲುತ್ತಿದ್ದ ರೋಗಿಯ ಜೀವ ರಕ್ಷಿಸಿದ ಡಾ. ಚಂದ್ರಶೇಖರ್ ಸುಬೇದಾರ್

0
475

ಶಹಾಪುರ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾ ಸಾವು ಮತ್ತು ಬದುಕಿನ ಮಧ್ಯೆ ಹೋರಾಟ ನಡೆಸಿದ ರೋಗಿಯನು ಕೊನೆಗೂ ವೈದ್ಯರ ತಂಡವೊಂದನ್ನು ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಶಹಾಪುರದ ಶ್ರೀಅಚ್ಚಪ್ಪಗೌಡ ಸುಬೇದರ್ ಸ್ಮಾರಕ ಆಸ್ಪತ್ರೆಯಲ್ಲಿ ಜರುಗಿದೆ.

ಶಹಾಪುರ ತಾಲೂಕಿನ ಗಂಗನಾಳ ಗ್ರಾಮದ ನಿವಾಸಿ ಬೀರಪ್ಪ(28) ಎಂಬ ವ್ಯಕ್ತಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾ ಸುಬೇದಾರ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರಾದ ಡಾ. ಚಂದ್ರಶೇಖರ್ ಸುಬೇದಾರ್ ಆತನನ್ನು ಪರೀಕ್ಷೆಗೆ ಒಳಪಡಿಸಿ ರೋಗಿಯ ಹೊಟ್ಟೆಯಲ್ಲಿನ ದೊಡ್ಡ ಕರುಳಿಗೆ ರಂಧ್ರ ಬಿದ್ದಿದೆ ಎಂದು ಖಚಿತಪಡಿಸಿದರು.

Contact Your\'s Advertisement; 9902492681

ಸಮಯ ಕಳೆದಂತೆಲ್ಲ ರೋಗಿಯ ಹೊಟ್ಟೆ ನೋವು ತುಂಬಾ ಜಾಸ್ತಿ ಆಗ ತೊಡಗಿದಾಗ ಕಲಬುರ್ಗಿಯ ವೈದ್ಯರೊಂದಿಗೆ ಡಾ. ಚಂದ್ರಶೇಖರ ಸುಬೇದಾರ್ ಮಾತನಾಡಿ ಸಮಗ್ರವಾದ ವಿಷಯವನ್ನು ಅವರೊಂದಿಗೆ ಹಂಚಿಕೊಂಡಾಗ 2 ಗಂಟೆಯ ಒಳಗಾಗಿ ಆ ರೋಗಿಗೆ ಚಿಕಿತ್ಸೆ ಮಾಡದಿದ್ದರೆ ಬದುಕುವುದು ಬಹಳ ಕಷ್ಟ ಎಂದು ಕಲಬುರ್ಗಿ ವೈದ್ಯರು ಸ್ಪಷ್ಟಪಡಿಸಿದರು.

ಆಗ ಡಾ. ಚಂದ್ರಶೇಖರ್ ಸುಬೇದಾರರು ಅವರನ್ನು ಕೂಡಲೇ ಶಹಾಪುರ ಪಟ್ಟಣದ ಶ್ರೀಅಚ್ಚಪ್ಪಗೌಡ ಸುಬೇದಾರ್ ಆಸ್ಪತ್ರೆಗೆ ಬರಲು ಹೇಳಿದಾಗ ಕೇವಲ 1 ತಾಸಿನಲ್ಲಿ ಕಲಬುರ್ಗಿಯಿಂದ ವೈದ್ಯರಾದ ದಾ. ಅಭಿಷೇಕ್ ರೆಡ್ಡಿ ಪಲ್ಲಾ, ಹಾಗೂ ಡಾ.ಶರಣರೆಡ್ಡಿ ತಂಡ ಆಗಮಿಸಿ ಚಿಕಿತ್ಸೆ ಮಾಡಿ ಆ ರೋಗಿಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಡ ರೋಗಿಯ ಪ್ರಾಣ ಉಳಿಸಿದ ಶ್ರೇಯಸ್ಸು ಆ ಚಿಕಿತ್ಸಾ ತಂಡದ ವೈದ್ಯರಿಗೂ ಹಾಗೂ ಅಚ್ಚಪ್ಪಗೌಡ ಸುಬೇದಾರ ಸ್ಮಾರಕ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೂ ಸಲ್ಲುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here