ಕಲಬುರಗಿ: ನೀರಿನ ತಗ್ಗಿನಲ್ಲಿ ಬಿದ್ದು ಬಾಲ ಕಾರ್ಮಿಕನ ಸಾವು

0
26

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣ ಹತ್ತಿರದ ಸ್ಟಾರ್ ಲೈನ್ ಮಕ್ಕಳ ಆಸ್ಪತ್ರೆ ಹಿಂಬದಿಯ ಮಳೆ ನೀರಿನಿಂದ ತುಂಬಿದ ತಗ್ಗಿನಲ್ಲಿ ಬಾಲ ಕಾರ್ಮಿಕ ಬಿದ್ದು ಮೃತಪಟ್ಟಿರುವ ಘಟನೆ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಬಾಲಕ 9 ವರ್ಷದ ಬಾಲಕನಾಗಿದ್ದು, ಸದ್ಯ ಬಾಲಕನ ಹೆಸರು ತಿಳಿದುಬಂದಿಲ್ಲ. ದರ್ಗಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದ್ದು, ಇಲ್ಲಿನ ಆಲುಭಾತ್ ಭಂಡಿ ಯಲ್ಲಿ ದಿನಗೂಲಿ ಕೆಲಸಕ್ಕೆ ಇದ್ದನು ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಬಾಲಕನು ಬಹಿರ್ದೇಷೆಗೆಂದು ಹೇಳಿ ಹೋಗ್ಗಿದ್ದು, ನಾಲ್ಕು ತಾಸು ಕಳೆದರು ಮರಳಿ ಬರದಿದ್ದಾಗ ಭಂಡಿ ಮಾಲೀಕ ಹುಡುಕಾಟ ನಡೆಸಿ ಎಲ್ಲಿಯೂ ಸಿಗದ ಕಾರಣ ಅಶೋಕ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಯಾರು ಸಹ ಪ್ರಕರಣ ದಾಖಲಿಸಿಲ್ಲ ಎಂದು ಆಶೋಕರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here