ಸುರಪುರ ತಾಲ್ಲೂಕು ಮುಖ್ಯೋಪಾದ್ಯಾಯರ ಸಂಘಕ್ಕೆ ಯಲ್ಲಪ್ಪ ಕಾಡ್ಲೂರ ಅಧ್ಯಕ್ಷ

0
93
ಸುರಪುರ ತಾಲ್ಲೂಕಿನ ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಯಲ್ಲಪ್ಪ ಕಾಡ್ಲೂರವರನ್ನು ಸನ್ಮಾನಿಸಲಾಯಿತು.

ಸುರಪುರ: ಮುಖ್ಯೋಪಾದ್ಯಾಯರ ಸಂಘದ ಸುರಪುರ ತಾಲ್ಲೂಕು ಅಧ್ಯಕ್ಷರಾಗಿ ಯಲ್ಲಪ್ಪ ಕಾಡ್ಲೂರ ಅವಿರೋಧವಾಗಿ ಆಯ್ಕೆಯಾದರು.ಸೋಮವಾರ ನಡೆಯಬೇಕಿದ್ದ ಚುನಾವಣೆಯಲ್ಲಿ ಎದುರಾಳಿಗಳಿಲ್ಲದ್ದರಿಂದ ಅವಿರೋಧ ಆಯ್ಕೆಯಾಗಿ ಘೋಷಿಸುತ್ತಿದ್ದಂತೆ ಅವರ ಸ್ನೇಹಿತರು ಮತ್ತು ಸಹಪಾಠಿ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವಿಕರಿಸಿದ ನೂತನ ಅಧ್ಯಕ್ಷ ಯಲ್ಲಪ್ಪ ಕಾಡ್ಲೂರ ಮಾತನಾಡಿ,ತಾಲ್ಲೂಕಿನ ಪ್ರೌಢ ಶಾಲೆಗಳ ಮುಖ್ಯೋಪಾದ್ಯಾಯರು ಮತ್ತು ಇತರೆ ಶಿಕ್ಷಕರ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸುವೆನು. ಅಲ್ಲದೆ ಸರಕಾರದಿಂದ ಶಿಕ್ಷಕರಿಗೆ ದೊರೆಯಬೇಕಾದ ಅನೇಕ ಸೌಲಭ್ಯಗಳಿಗಾಗಿ ಹೋರಾಟ ರೂಪಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ವೆಂಕಟೇಶ ನಾಯಕ,ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಭೀಮಣ್ಣ ಬೋಸಗಿ,ಕಕ್ಕೇರಾ ಎಸ್.ಜೆ.ಟಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ:ಭೀಮಪ್ಪ ಹಾಗು ಜಯ ಕರ್ನಾಟಕ ಸಂಘದ ತಾಲ್ಲೂಕಾಧ್ಯಕ್ಷ ರವಿ ನಾಯಕ ಬೈರಿಮರಡಿ, ಹಣಮಂತ್ರಾಯ ಚೌಡೇಶ್ವರಿಹಾಳ,ಹೆಮನೂರ ಸರಕಾರಿ ಶಾಲೆಯ ಪ್ರಧಾನಗುರು ಸಿದ್ದಣ್ಣ ಹೊಸಗೌಡ್ರ ಸೇರಿದಂತೆ ಇನ್ನೂ ಅನೇಕರು ಸನ್ಮಾನಿಸಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here