ಎಲ್ಲಾ ವರದಿಗಾರರಿಗೆ ನಿವೇಶನ ಒದಗಿಸಲಾಗುವುದು-ಶಾಸಕ ರಾಜುಗೌಡ ಭರವಸೆ

0
71

ಸುರಪುರ: ನಗರದ ಎಲ್ಲಾ ವರದಿಗಾರರಿಗೆ ನಿವೇಶನಗಳನ್ನು ನೀಡಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷರು ಹಾಗು ಶಾಸಕ ನರಸಿಂಹ ನಾಯಕ ರಾಜುಗೌಡ ಮಾತನಾಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಘಟಕದ ಪದಾಧಿಕಾರಿಗಳ ನಿಯೋಗದ ಮನವಿಯನ್ನು ಸ್ವೀಕರಿಸಿ ಮಾತನಾಡಿ,ತಮ್ಮೆಲ್ಲರಿಗೂ ನಿವೇಶನ ಒದಗಿಸುವುದು ನನ್ನ ಜವಬ್ದಾರಿಯಾಗಿದೆ.ಆದ್ದರಿಂದ ಶೀಘ್ರದಲ್ಲಿಯೆ ತಮ್ಮೆಲ್ಲ ವರದಿಗಾರರ ಪಟ್ಟಿಯನ್ನು ನೀಡಿದಲ್ಲಿ ನಿವೇಶನ ಒದಗಿಸುವುದಾಗಿ ತಿಳಿಸಿದರು.ಅಲ್ಲದೆ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಜೀವನ್‌ಕುಮಾರ ಕಟ್ಟಿಮನಿಯವರಿಗೆ ಸೂಚಿಸಿ ತಾಲೂಕು ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಶೀಘ್ರದಲ್ಲಿಯೆ ಅನುದಾನ ನೀಡುವೆನು ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಜೀವನ್‌ಕುಮಾರ ಮಾತನಾಡಿ,ಈಗಾಗಲೇ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದನ್ನು ನಗರಸಭೆ ಮೀಟಿಂಗ್‌ನಲ್ಲಿ ಪಾಸ್ ಮಾಡಲಾಗಿದೆ ಅಲ್ಲದೆ ಕೆಜೆಯು ಸದಸ್ಯರಿಗೆ ನಿವೇಶನವನ್ನು ಗುರುತಿಸಿ ತೋರಿಸಲಾಗಿದೆ,ಶೀಘ್ರದಲ್ಲಿಯೆ ತಮ್ಮ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸುವುದಾಗಿ ತಿಳಿಸಿದರು.ಆದಷ್ಟು ಬೇಗನೆ ಅನುಮೋದನೆಗೆ ಕಳುಹಿಸಿ ಎಂದು ಶಾಸಕರು ಸೂಚಿಸಿದರು.

ನಂತರ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಎಲ್ಲಾ ವರದಿಗಾರರಲಿಗೆ ನಿವೇಶನ ಒದಗಿಸುವ ಜೊತೆಗೆ ಮನೆಗಳನ್ನು ನಿರ್ಮಾಣಗೊಳಿಸಿ ಕೊಡುವಂತೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷ ಮಲ್ಲು ಗುಳಗಿ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಭಾವಿ,ಖಜಾಂಚಿ ಮಹಾದೇವಪ್ಪ ಕಟ್ಟಿಮನಿ ಹಾಗು ಸದಸ್ಯರಾದ ಮನಮೋಹನ್ ದೇವಾಪುರ,ಕಲೀಂ ಫರೀದಿ, ಶ್ರೀಮಂತ ಚಲುವಾದಿ,ಪುರುಷೋತ್ತಮ ದೇವತ್ಕಲ್,ಮದನ್‌ಲಾಲ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here