ದೊಡ್ಡಪ್ಪ ಅಪ್ಪಾ ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಚರಣೆ: ಅರುಣಕುಮಾರ ಪಾಟೀಲ

0
7

ಕಲಬುರಗಿ: ಜಿಲ್ಲಾ ವೀರಶೈವ ಸಮಾಜ ಕಲಬುರಗಿಯ ಕಾರ್ಯಕಾರಿಣಿ ಸಮಿತಿ ವಿಶೇಷ ಆಹ್ವಾನಿತರ ಸಭೆ ಜರುಗಿತು. ಸಭೆಯ ಅಧ್ಯಕ್ಷತೆವಹಿಸಿದ್ದ ಅರುಣಕುಮಾರ ಪಾಟೀಲರು ಮಾತನಾಡಿ ಶೀಘ್ರದಲ್ಲಿಯೇ ಇನ್ನುಳಿದ ತಾಲೂಕ ಘಟಕಗಳನ್ನು ರಚಿಸಿ, ಸಮಾಜದಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಈ ಸಭೆಯಲ್ಲಿ ನವೆಂಬರ್ ೧, ೨೦೨೧ ರಂದು ಶರಣಬಸವೇಶ್ವರ ಸಂಸ್ಥಾನದ ೯ನೇ ಪಿಠಾಧಿಪತಿಗಳಾದ ಚಿರಂಜಿವಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾರ್ಯದರ್ಶಿ ಶ್ರೀಶೈಲ ಘೂಳಿಯವರು ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ಸಭೆಯನ್ನುದ್ದೇಶಿಸಿ ಸಂಘಟನೆ ಮತ್ತು ಸಮಾಜಿಕ ಅಭಿವೃದ್ಧಿ ಕುರಿತು, ಉಪಾಧ್ಯಕ್ಷರಾದ ಕಲ್ಯಾಣಪ್ಪ ಮಳಖೇಡ, ಬಸವರಾಜ ಯಾಲಕ್ಯ, ಚಂದ್ರಶೇಖರ ಬಿಜಾಪುರ, ಕೆ.ಎಸ್. ಆಲಿಪಾಟೀಲ, ಪ್ರಶಾಂತ ಗುಡ್ಡಾ ಜಿಗಲ್ ಮತ್ತು ಶಿವಪ್ಪ ಪಾಟೀಲ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಪ್ರಖ್ಯಾತ ವಾಗ್ಮಿ ಮಹಾಸ್ವಾಮಿಗಳನ್ನು ಮತ್ತು ಖ್ಯಾತ ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

Contact Your\'s Advertisement; 9902492681

ಹಾಗೆಯೇ ಈ ಸಭೆಯಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಸಮಾಜಮುಖಿ ಕಾರ್ಯ ಮಾಡುತ್ತಿರುವ ಪ್ರಭು ಹಾದಿಮನಿ, ಶಂಭು ಪಾಟೀಲ ಬಳಬಟ್ಟಿ, ಶಿವಾನಂದ ಪಿಸ್ತಿ, ಸುನೀಲ ಮಚ್ಚಟ್ಟಿ, ರಾಮುರೆಡ್ಡಿ ಮತ್ತು ಸುನೀಲ ಬನಶೆಟ್ಟಿ, ಮಲ್ಲಿಕಾರ್ಜುನ ಉದನೂರ ಅವರನ್ನು ಸನ್ಮಾನಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಸಾತಪ್ಪ ಪಟ್ಟಣಕರ, ಸುಭಾಷ ಬಿಜಾಪುರೆ, ಶಶಿಕಾಂತ ಪಾಟೀಲ, ಕಲ್ಯಾಣಪ್ಪ ಗೋಗಿ, ಶಿವಶರಣಪ್ಪ ಮುಕರಂಬಿ, ಮಾಂತೇಶ ಪಾಟೀಲ ಜಗತ್ತ, ರಮೇಶ ಪಾಟೀಲ, ಹಣಮಂತರಾವ ಪಾಟೀಲ, ಸಂಗಪ್ಪ ಮನ್ನಪ್ಪ, ಶಿವಕುಮಾರ ಶಾಬಾದಿ, ಅವಿನಾಶ್ ಉಪಳಾಂವ, ಸಂತೋಷ ಪಾಟೀಲ, ಪೂರ್ವಿ ಮೆಡಿಕಲ್, ಹಣಮಂತರಾವ ಪಾಟೀಲ ಅಳಂದ, ಸಚ್ಚಿನ ಸ್ವಂತ ಯುವ ಘಟಕದ ಅಧ್ಯಕ್ಷರು, ಸಂಜುಕುಮಾರ ಕಾಳಗಿ, ಎಸ್.ವ್ಹಿ. ಮಠಪತಿ ಉಪಾಧ್ಯಕ್ಷರು ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here