ಪಾಶ್ಚಿಮಾತ್ಯಾರಿಗಿಂತ ಎಂಟು ಶತಮಾನಗಳ ಮೊದಲೆ ಶರಣರು ನಿರ್ವಾಹಣ ಶಾಸ್ತ್ರದ ತತ್ವಗಳನ್ನು ಜಗತ್ತಿಗೆ ನೀಡಿದ್ದಾರೆ

0
34

“ಪಾಶ್ಚಿಮಾತ್ಯಾರಿಗಿಂತ ಎಂಟು ಶತಮಾನಗಳ ಮೊದಲೆ ಶರಣರು ನಿರ್ವಾಹಣ ಶಾಸ್ತ್ರದ ತತ್ವಗಳನ್ನು ಜಗತ್ತಿಗೆ ನೀಡಿದ್ದಾರೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಣಪತಿ ಬಿ ಸಿನ್ನೂರ ಹೇಳಿದರು.

ನಗರದ ನುಭವಮಂಟಪದಲ್ಲಿ ಬಸವ ಸಮಿತಿ ಆಯೋಜಿಸಿದ್ದ 682 ನೇ ಅರಿವಿನಮನೆ ಕಾರ್ಯಕ್ರಮದ ಅಂಗವಾಗಿ “ವಚನ ಸಾಹಿತ್ಯದಲ್ಲಿ ನಿರ್ವಹಣಾ ಶಾಸ್ತ್ರದ ತತ್ವಗಳು” ಎಂಬ ವಿಷಯದಕುರಿತು ಮಾತನಾಡಿದರು.

Contact Your\'s Advertisement; 9902492681

ಅವರು ಮುಂದುವರಿದು ಮಾತನಾಡಿ “ವಚನಗಳು ಅನುಭವಮಂಟಪದಲ್ಲಿ ಚರ್ಚಿಸಿ ಬರೆದಿರುವುದರಿಂದ ಅವು ತರ್ಕಬದ್ದ, ತಾರ್ಕಿಕ ಮತ್ತು ವಾಸ್ತವಿಕವಾಗಿವೆ ಹಾಗು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರುಇತರ ಶರಣರೊಂದಿಗೆ ಶೇರಿ 12 ನೇ ಶತಮಾನದಲ್ಲಿನ ಸಾಮಾಜಿಕ, ಧಾರ್ಮಿಕ ಮತ್ತುಆಧ್ಯಾತ್ಮಿಕ ಸಮಸ್ಸೆಗಳಿಗೆ ವಚನಗಳ ರೂಪದಲ್ಲಿ ಪರಿಹಾರ ಸೂಚಿಸಿದರು.

ವ್ಯಕ್ತಿಯ, ಸಮಾಜದ ಮತ್ತುಧರ್ಮದ ಶುದ್ದೀಕರಣವೇ ವಚನ ಸಾಹಿತ್ಯದ ಮೂಲ ಉದ್ದೇಶವಾಗಿತ್ತು, ಆದ್ದರಿಂದ ವಚನಗಲ್ಲಿನ ಶರಣರ ತತ್ವಗಳು ಇಂದಿನ ಉದ್ಯೋಗಿಗಳ ವ್ಯಕ್ತಿತ್ವದಉನ್ನತೀಕರಣ, ಸಂಸ್ಥೆಗಳ ಸಂಘಟನೆ ಮತ್ತು ಅವುಗಳ ಉತ್ತಮ ನಿರ್ವಹಣೆಯಲ್ಲಿ ಬಹಳ ಸಹಕಾರಿಯಾಗಲಿವೆ. ಬಸವಣ್ಣವರ ನಾಯಕತ್ವಇಂದುಎಲ್ಲರಿಗೂ ಮಾದರಿಯಾಗಿದೆ.ಬಸವಣ್ಣನವರ ಪ್ರಕಾರಒಬ್ಬ ನಾಯಕ ಯಶಸ್ವಿ ಯಾಗಬೇಕಾದರೆ ಭಕ್ತನಯೋಗಕ್ಷೇಮದ (ಉದ್ಯೋಗಿಯಯೋಗಕ್ಷೇಮ) ಜೊತೆಗೆಕಾಯಕದ (ಕೆಲಸದ) ನಿರ್ವಹಣೆ ಬಗ್ಗೆ ಸಮನಾಗಿ ಒತ್ತುಕೊಡಬೇಕುಎಂದು ಹೇಳುತ್ತಾರೆ.ಓಹಿಯೋ ಸ್ಟೇಟ್ ವಿಶ್ವ ವಿದ್ಯಾಲಯ, ಮಿಚಿಗನ್ ವಿಶ್ವ ವಿದ್ಯಾಲಯ.

ಬ್ಲೇಕ್ ಮತ್ತು ಮೌಟನ್ ನಾಯಕತ್ವಜಾಲ, ಫಿಡ್ಲರನ ಆಕಸ್ಮಿಕ ಸಿದ್ಧಾಂತ ಮತ್ತು ಹರ್ಷಿ ಮತ್ತು ಬ್ಲಾಂಚಾರ್ಡ್‍ರವರ ನಾಯಕತ್ವ ಸಿದ್ದಂತಾಗಳು ಕೂಡಉದ್ಯೋಗಿಆಧಾರಿತ ಮತ್ತು ಕೆಲಸ ಆಧಾರಿತ ವಾಗಿವೆ. ಅಂದರೆ 20ನೆ ಶತಮಾನದಲ್ಲಿ ಪಾಶ್ಚಿಮಾತ್ಯರು ನೀಡಿದ ನಾಯಕತ್ವ ಸಿದ್ದಾಂತಗಳ ತತ್ವಗಳನ್ನು ಬಸವಣ್ಣನವರು 12 ನೇ ಶತಮಾದಲ್ಲಿಯೇ ನೀಡಿದ್ದಾರೆ.

ಆದರೆ ನಾವು ಅದನ್ನುಗುರುತಿಸುವಲ್ಲಿ ವಿಫಲರಾಗಿದ್ದೇವೆಅಲ್ಲದೆ ಪಾಶ್ಚಿಮಾತ್ಯರು ನಮಗಿಂತಲೂ ಶ್ರೇಷ್ಠ ನಿರ್ವಹಣಾಚಿಂತಕರು ಎಂಬ ತಪ್ಪುಕಲ್ಪನೆಯಲ್ಲಿದ್ದೇವೆ. ಅದೇರೀತಿಅಂಬಿಗರಚೌಡಯ್ಯನವರುಅಬ್ರಹಾಮ ಮಾಸ್ಲೋಅವರಿಗಿಂತಲೂ ಮುಂಚೆಯೇ ಮಾನವನ ಅಗತ್ಯಶ್ರೇಣಿಗಳ ಸಿದ್ಧಾಂತವನ್ನು ನೀಡಿದ್ದಾರೆ, ಅμÉ್ಟೀಅಲ್ಲದೆಚೌಡಯ್ಯನವರಅಗತ್ಯ ಶ್ರೇಣಿಗಳ ಸಿದ್ಧಾಂತವು ಮ್ಯಾಸ್ಲೊ ಸಿದ್ಧಾಂತಕ್ಕಿಂತ ವಿಶಾಲವಾದುದ್ದಾಗಿದೆ.ಏಕೆಂದರೆ ಮಾಸ್ಲೋ ಕೇವಲ ಭೌತಿಕ ಅಗತ್ಯತೆಗಳ ಬಗ್ಗೆ ಮಾತನಾಡಿದರೆಚೌಡಯ್ಯನವರು ಭೌತಿಕ ಮತ್ತುಆಧ್ಯಾತ್ಮಿಕ ಬಯಕೆಗಳೆರಡರ ಬಗ್ಗೆ ಹೇಳಿದ್ದಾರೆ.

ಆದ್ದರಿಂದ ಮಾಸ್ಲೋನ್ ಸಿದ್ಧಾಂತ ಸಂಕುಚಿತವಾಗಿದ್ದರೆಚೌಡಯ್ಯನವರ ಸಿದ್ಧಾಂತ ಪರಿಪೂರ್ಣವಾಗಿದೆ.ಇಂದಿನ ಈ ಭಾಷಣ ವಚನ ಸಾಹಿತ್ಯದಲ್ಲಿ ನಿರ್ವಹಣಾ ಶಾಸ್ತ್ರದ ತತ್ವಗಳು ಕುರಿತಒಂದು ಸಣ್ಣ ಹೆಜ್ಜೆ.ಈ ವಿಷಯದಕುರಿತು ಹೆಚ್ಚಿನಅಧ್ಯಯನ ಮತ್ತು ಸಂಶೋಧನೆಯಅವಶ್ಯಕತೆಇದೆಎಂದು ಹೇಳಿದರು.

ಇದೇ ಸಂದರ್ಭದಲ್ಲಿಕೇಂದ್ರ ಬಸವ ಸಮಿತಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಅರವಿಂದಜತ್ತಿಅವರು ಮಾತನಾಡಿ “ವಚನ ಸಾಹಿತ್ಯದಲ್ಲಿ ನಿರ್ವಹಣಾ ಶಾಸ್ತ್ರದ ತತ್ವಗಳು” ಕುರಿತುಡಾ.ಗಣಪತಿ ಸಿನ್ನೂರ ರವರುಅತ್ಯದ್ಭುತವಾಗಿ ಮಾತನಾಡಿದ್ದಾರೆ.ಅವರು ಈ ವಿಷಯದಕುರಿತು ಹೆಚ್ಚಿನಅಧ್ಯಯನ ಮತ್ತು ಸಂಶೋಧನೆಕೈಗೊಂಡರೆ ಬಸವ ಸಮಿತಿಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲಬುರಗಿ ಬಸವ ಸಮಿತಿಅಧ್ಯಕ್ಷರಾದತಾಯಿ ವಿಲಾಸವತಿ ಖುಬಾ, ಡಾ. ವೀರಣ್ಣದಂಡೆ, ಡಾ.ಜಯಶ್ರೀದಂಡೆ, ಶ್ರೀ ಉದ್ದಂಡಯ್ಯ, ಕರ್ನಾಟಕಕೇಂದ್ರೀಯ ವಿಶ್ವ ವಿದ್ಯಾಲಯದಡಾ. ವಿಕ್ರಮ ವಿಸಾಜಿ, ಡಾ.ಚನ್ನವೀರಆರ್ ಎಂ ಉಪಸ್ಥಿತರಿದ್ದರು. ರೆ. ಆದರೆ ನಾವುಅದನ್ನುಗುರುತಿಸುವಲ್ಲಿವಿಫಲರಾಗಿದ್ದೇವೆಅಲ್ಲದೆಪಾಶ್ಚಿಮಾತ್ಯರುನಮಗಿಂತಲೂಶ್ರೇಷ್ಠನಿರ್ವಹಣಾಚಿಂತಕರುಎಂಬತಪ್ಪುಕಲ್ಪನೆಯಲ್ಲಿದ್ದೇವೆ.

ಅದೇ ರೀತಿ  ಅಂಬಿಗರ ಚೌಡಯ್ಯನವರು ಅಬ್ರಹಾಮಮಾಸ್ಲೋ ಅವರಿಗಿಂತಲೂ ಮುಂಚೆಯೇ ಮಾನವನ ಅಗತ್ಯ ಶ್ರೇಣಿಗಳ ಸಿದ್ಧಾಂತವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಚೌಡಯ್ಯನವರ ಅಗತ್ಯ ಶ್ರೇಣಿಗಳ ಸಿದ್ಧಾಂತವು ಮ್ಯಾಸ್ಲೊಸಿದ್ಧಾಂತಕ್ಕಿಂತ ವಿಶಾಲವಾದುದ್ದಾಗಿದೆ. ಏಕೆಂದರೆ ಮಾಸ್ಲೋ ಕೇವಲ ಭೌತಿಕ ಅಗತ್ಯತೆಗಳ ಬಗ್ಗೆ ಮಾತನಾಡಿದರೆ ಚೌಡಯ್ಯನವರು ಭೌತಿಕ ಮತ್ತು ಆಧ್ಯಾತ್ಮಿಕ ಬಯಕೆಗಳೆರಡರ ಬಗ್ಗೆ ಹೇಳಿದ್ದಾರೆ.

ಆದ್ದರಿಂದ ಮಾಸ್ಲೋನ್ಸಿದ್ಧಾಂತ ಸಂಕುಚಿತವಾಗಿದ್ದರೆ ಚೌಡಯ್ಯನವರ ಸಿದ್ಧಾಂತ ಪರಿಪೂರ್ಣವಾಗಿದೆ. ಇಂದಿನ ಈ ಭಾಷಣ ವಚನ ಸಾಹಿತ್ಯದಲ್ಲಿ ನಿರ್ವಹಣಾಶಾಸ್ತ್ರದತತ್ವಗಳು ಕುರಿತ ಒಂದು ಸಣ್ಣ ಹೆಜ್ಜೆ. ಈ ವಿಷಯದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಯ ಅವಶ್ಯಕತೆ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಬಸವಸಮಿತಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಅವರು ಮಾತನಾಡಿ“ ವಚನಸಾಹಿತ್ಯದಲ್ಲಿ ನಿರ್ವಹಣಾಶಾಸ್ತ್ರದತತ್ವಗಳು ” ಕುರಿತು ಡಾ. ಗಣಪತಿ ಸಿನ್ನೂರ ರವರು ಅತ್ಯದ್ಭುತವಾಗಿ ಮಾತನಾಡಿದ್ದಾರೆ.

ಅವರು ಈ ವಿಷಯದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಕೈಗೊಂಡರೆ ಬಸವಸಮಿತಿ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲಬುರಗಿ ಬಸವ ಸಮಿತಿ ಅಧ್ಯಕ್ಷರಾದ ತಾಯಿ ವಿಲಾಸವತಿ ಖುಬಾ, ಡಾ.ವೀರಣ್ಣದಂಡೆ, ಡಾ.ಜಯಶ್ರೀದಂಡೆ, ಶ್ರೀಉದ್ದಂಡಯ್ಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ವಿಕ್ರಮ ವಿಸಾಜಿ, ಡಾ.ಚನ್ನವೀರಆರ್ಎಂ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here