ರೈತರ ಏಳಿಗೆಗಾಗಿ ನಾವೆಲ್ಲರೂ ಜೊತೆಗೂಡಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ: ಎಂ.ವೈ. ಪಾಟೀಲ

0
13

ಕಲಬುರಗಿ: ದೇಶದ ಬೆನ್ನೆಲುಬಾಗಿ ಇಡೀ ಮಾನವ ಕುಲಕ್ಕೆ ಅನ್ನ ನೀಡುವ ರೈತರಿಗೆ ಅನ್ಯಾಯವಾಗದಂತೆ ಕೆಲಸ ಮಾಡಿದಾಗ ಮಾತ್ರ ರೈತರ ಏಳಿಗೆ ಸಾಧ್ಯ ಎಂದು ಶಾಸಕ ಎಂ. ವೈ. ಪಾಟೀಲ ಹೇಳಿದರು.

ಅಫಜಲಪುರ ಮತಕ್ಷೇತ್ರದಲ್ಲಿ ಬರುವ  ತಿಳಗೂಳ   ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸುಮಾರು ರೂ.25 ಸಾವೀರ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ  ಬೆಲೆ ಸಿಗದೆ ತುಂಬಾ ಸಂಕಷ್ಟಕ್ಕೆ ಸಿಲುಕಿ  ರೈತರು ತಾವು ಮಾಡಿದ ಸಾಲವನ್ನು ಮರುಪಾವತಿ ಮಾಡಕ್ಕಾಗದೆ ತಮ್ಮ ಜೀವನವನ್ನು ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ರೈತರು ತಾವು ಮಾಡಿದ ಸಾಲಕ್ಕೆ ಹೆದರಿ ಜೀವ ಕಳೆದುಕೊಂಡು ತಮ್ಮ ಕುಟುಂಬ ಬೀದಿ ಪಾಲು ಮಾಡದೆ ಧೈರ್ಯದಿಂದ ಸಮಸ್ಯೆಗಳನ್ನು  ಎದುರಿಸಿ ಕುಟುಂಬ ನಿರ್ವಹಣೆ ಮಾಡಲು ಪ್ರತಿಯೊಬ್ಬ ರೈತರು ಮುಂದಾಗಬೇಕು ಎಂದು ಪಾಟೀಲ ಹೇಳಿದರು.

Contact Your\'s Advertisement; 9902492681

ರೈತರ ಕಷ್ಟ ಸುಖದಲ್ಲಿ ಭಾಗಿಯಾಗಿ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಜೊತೆಗೆ ಇರುತ್ತೇನೆ ಎಂದು  ರೈತರಿಗೆ ಶಾಸಕ   ಎಂವೈ. ಪಾಟೀಲ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಡಿಸಿಸಿ  ಬ್ಯಾಂಕ್  ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಟಗಿ,   ತಿಳಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ  ಬಾಬಾಸಾಹೇಬ ಜಿ. ಪಾಟೀಲ ಸರಡಗಿ, ಮಾಜಿ‌ ಜಿ.‌ಪಂ‌. ಸದಸ್ಯರಾದ ದಿಲೀಪ್ ಆರ್. ಪಾಟೀಲ, ಫರಹತಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ತಿಬಶೆಟ್ಟಿ, ದೇವಿಂದ್ರಕುಮಾರ ಸ್ಥಾವರಮಠ, ಸೋಮಶೇಖರ್ ಕಲಬುರಗಿ, ಎಲೀಶ್ ಬುಳ್ಳಾ, ಶರಣಗೌಡ ಪಾಟೀಲ ಹಳ್ಳಿ, ಚಂದ್ರಕಾಂತ ನಡಗಟ್ಟಿ, ವಿಜಯಕುಮಾರ್ ಬಳವಾಡ, ಶರಣಗೌಡ ಜೆ. ಪಾಟೀಲ, ಲಕ್ಷ್ಮಣ  ಲಕಬೋ, ಬಗವಂತರಾಯ ಪರೀಟ, ರಮೇಶ ನಾಟೀಕಾರ,  ಶರಣು ಮಂದ್ರವಾಡ, ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಶಶಿಕಾಂತ. ಮರತೂರ, ಕಾರ್ಯದರ್ಶಿ  ಮಲ್ಲಿಕಾರ್ಜುನ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here