ತಮಗೆ ಪಾಸಿಟಿವ್ ಇದ್ದರು ಜನರಿಗಾಗಿ ವಿಶ್ರಾಂತಿ ಮರೆತರು ರಾಜುಗೌಡ: ಶಂಕರನಾಯಕ

0
43

ಸುರಪುರ: ತಮ್ಮ ಕ್ಷೇತ್ರದ ಜನರ ಕಾಪಾಡುವುದು ಮುಖ್ಯವಾಗಿದೆ ಎಂದು ತಾವೇ ಸ್ವತಃ ಕೊರೊನಾ ಸೊಂಕಿಗೆ ಸಿಲುಕಿಗೆ ವೈದ್ಯರು ವಿಶ್ರಾಂತಿ ಮಾಡಬೇಕೆಂದು ಸಲಹೆ ನೀಡಿದಾಗ ಜನರಿಗಾಗಿ ವಿಶ್ರಾಂತಿ ಮರೆತು ಹಗಲಿರಳು ಜನರ ಬಳಿಗೆ ಬಂದಿದ್ದರು ಶಾಸಕರಾದ ರಾಜುಗೌಡರು ಎಂದು ಮುಖಂಡ ಶಂಕರ ನಾಯಕ ಮಾತನಾಡಿದರು.

ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ತಾಯಿ ತಿಮ್ಮಮ್ಮ ಗೌಡತಿ ಮೆಮೊರೇಬಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊರೊನಾ ವಾರಿಯರ್ಸ್‌ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಶಾಸಕರಾದ ರಾಜುಗೌಡರು ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಎಲ್ಲಾ ವಾರಿಯರ್ಸ್‌ಗಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇಡೀ ಕ್ಷೇತ್ರದಾದ್ಯಂತ ಎಲ್ಲೆಡೆ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಗುತ್ತಿದೆ ಎಂದರು.ಅಲ್ಲದೆ ನಾವೆಲ್ಲರು ನಮಗಾಗಿ ಹಗಲಿರಳು ಸೇವೆ ಮಾಡುತ್ತಿರುವ ರಾಜುಗೌಡರಿಗೆ ಮತ್ತಷ್ಟು ಕೆಲಸ ಮಾಡಲು ಶಕ್ತಿ ತುಂಬೋಣ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿಗಳು,ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ರಾಜುಗೌಡ ಸೇವಾ ಸಮಿತಿಯ ಮುಖಂಡರು ಹಾಗು ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.ಇದಕ್ಕೂ ಮುನ್ನ ಬೆಳಿಗ್ಗೆ ವಾಗಣಗೇರಿ ಗ್ರಾಮದಲ್ಲಿಯೂ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀನಿವಾಸ ನಾಯಕ ದರಬಾರಿ,ದೊಡ್ಡ ದೇಸಾಯಿ ದೇವರಗೋನಾಲ,ಬಲಭೀಮ ನಾಯಕ ಬೈರಿಮಡ್ಡಿ,ಭೀಮಣ್ಣ ಬೇವಿನಾಳ,ಸಣ್ಣ ದೇಸಾಯಿ ದೇವರಗೋನಾಲ,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಚಂದಪ್ಪ ಯಾದವ್,ಕುಮಾರಸ್ವಾಮಿ ಗುಡ್ಡಡಗಿ,ಭೀಮರಾಯ ಒಂಟೆತ್ತು,ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರಿ,ರಂಗನಗೌಡ ಪಾಟೀಲ್ ದೇವಿಕೇರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here