ಪ್ರತಿಭಾವಂತ ‘ಸಾಧಕ ಬೋಧಕಿಯರಿಗೆ, ಗುರು ಸ್ತ್ರೀ’ಪ್ರಶಸ್ತಿ ಪ್ರದಾನ

0
67

ಕಲಬುರಗಿ: ಸಮಾಜದಲ್ಲಿ ಮಹತ್ತರವಾದ ಬದಲಾವಣೆ ತರಬಲ್ಲ ಅದಮ್ಯ ಶಕ್ತಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಗೆ ಎಲ್ಲ ಕಾಲದಲ್ಲೂ ಗೌರವದ ಸ್ಥಾನವಿದೆ. ಶಿಕ್ಷಕರನ್ನು ಗೌರವಿಸುವುದೆಂದರೆ ಒಂದು ಸಂಸ್ಕೃತಿಯನ್ನೇ ಗೌರವಿಸಿದಂತೆ ಎಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಭುವನೇಶ್ವರಿ ಹಳ್ಳಿಖೇಡ ಹೇಳಿದರು.

ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಬಸವೇಶ್ವರ ಪುತ್ಥಳಿ ಬಳಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ‘ಸಾಧಕ ಬೋಧಕಿಯರಿಗೆ. ಗುರು ಸ್ತ್ರೀ’ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಜಗತ್ತಿನಲ್ಲಿ ಶಿಕ್ಷಕ ವೃತ್ತಿಗೆ ಸಮಾನವಾದ ಇನ್ನೊಂದು ವೃತ್ತಿ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶೀತಲ್ ಜಾಧವ, ನಂದಿನಿ ಪಾಳಾ, ವೀರೇಶ ಬೋಳಶೆಟ್ಟಿ, ಹಿರಿಯ ಲೇಖಕರಾದ ಶಕುಂತಲಾ ಪಾಟೀಲ ಜಾವಳಿ, ನಾಗೇಂದ್ರಪ್ಪ ಮಾಡ್ಯಾಳೆ, ಸಾವಿತ್ರಿ ಪಾಟೀಲ, =- ಮಾತನಾಡಿದರು.

ಸಾಧಕ ಬೋಧಕಿಯರಾದ ಕಾಶಿಬಾಯಿ ಹತ್ತಿ, ಜಗದೇವಿ ಕೇದಾರನಾಥ ಕಣಕಿ, ಕಸ್ತೂರಿ ನಾಗೇಶ ಶಿವಗೋಳ, ಅಶ್ವಿನಿ ಪ್ರಕಾಶ ನರೋಣಾ, ವಿಜಯಲಕ್ಷ್ಮೀ ಬೋಳದೆ, ಜ್ಯೋತಿ ಡಿಗ್ಗಿ, ಶಾರದಾ ಕೆ., ಸಾವಿತ್ರಿ ಸಾಹು, ಲತಾ ಕುಲಕರ್ಣಿ, ಲತಾ ಹಳ್ಳಿಖೇಡ, ಸಾವಿತ್ರಿ ಜನವಾಡಕರ್ ಅವರನ್ನು ‘ಗುರು ಸ್ತ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪ್ರಮುಖರಾದ ಸೋಮಶೇಖರ ನಂದಿಧ್ವಜ, ಶರಣಬಸವ ಜಂಗಿನಮಠ, ಚಂದ್ರಕಾಂತ ಬಿರಾದಾರ, ಶಿವರಾಜ್ ಅಂಡಗಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಶರಣಬಸಪ್ಪ ನರೂಣಿ, ಶಿವಲೀಲಾ ತೆಗನೂರ, ರೇಣುಕಾ ಎನ್., ಡಾ.ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಶಿವಾನಂದ ಮಠಪತಿ, ವಿಶ್ವನಾಥ ತೊಟ್ನಳ್ಳಿ, ಸುರೇಶ ವಗ್ಗೆ, ವಿಜಯಲಕ್ಷ್ಮೀ ಹಿರೇಮಠ, ಜ್ಯೋತಿ ಪಾಟೀಲ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಅಶ್ವೀನಿ ಹಡಪದ, ರಾಜೇಂದ್ರ ಮಾಡಬೂಳ, ಸಿದ್ಧಾರಾಮ ಹಂಚನಾಳ,  ಮೀನಾಕ್ಷಿ ಕುಂಬಾರ, ಸಂತೋಷ ಕುಂಬಾರ, ವಿನೋದ ಶಲಗಾರ, ಪ್ರಭುಲಿಂಗ ಮೂಲಗೆ, ಜಯಶ್ರೀ ಜೈನ್, ಸಂಪತ ಹಿರೇಮಠ,  ಶಶಿಕಲಾ ಮಾಡ್ಯಾಳೆ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಪುತ್ರ ಹಾಗರಗಿ, ಆರ್.ಹೆಚ್.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here