ಶಿಕ್ಷಕ ದಂಪತಿಗಳಿಗೆ ‘ಆದರ್ಶ ಶಿಕ್ಷಕ’ ಪುರಸ್ಕಾರ ಅ.೧೨ ರಂದು

0
65

ಕಲಬುರಗಿ: ಆದರ್ಶವನ್ನು ಮೈಗೂಡಿಸಿಕೊಳ್ಳುವ ಜತೆಗೆ ಅದೇ ಮಾರ್ಗದಲ್ಲಿ ತನ್ನ ವಿದ್ಯಾರ್ಥಿಗಳನ್ನು ಸಹ ಬೆಳೆಸುವ, ತಾತ್ವಿಕ ಚಿಂತನೆ, ಮನೋವಿಜ್ಞಾನಿಯಾಗಿ ಮಕ್ಕಳನ್ನು ಸದಾ ಕಾಲ ಬೆಳೆಸುವ ಪ್ರಯತ್ನದಲ್ಲಿರುವ ನವ ಸಮಾಜದ ನಿಮಾಣದ ಜವಾಬ್ದಾರಿ ಹೊತ್ತಿರುವ ಜಿಲ್ಲೆಯ ಶಿಕ್ಷಕ ದಂಪತಿಗಳನ್ನು ಗುರುತಿಸಿ ಇಲ್ಲಿನ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಅ.೧೦ ರ ಬೆಳಗ್ಗೆ ೧೦.೪೫ ಕ್ಕೆ ನಗರದ ಕಲಾ ಮಂಡಳದಲ್ಲಿ ‘ಆದರ್ಶ ಶಿಕ್ಷಕ’ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕಿ ಶಿವಲೀಲಾ ರಾಜೇಂದ್ರ ಮಾಡಬೂಳ ತಿಳಿಸಿದ್ದಾರೆ.

ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ಇವರ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರು ಶಿಕ್ಷಕ ದಂಪತಿಗಳಿಗೆ ‘ಆದರ್ಶ ಶಿಕ್ಷಕ’ ಪುರಸ್ಕಾರ ನೀಡಲಿದ್ದಾರೆ. ಶಿಕ್ಷಣ ಪ್ರೇಮಿ ಮಹಾದೇವಪ್ಪ ಹಿಕ್ಕನಗುತ್ತಿ ಅಧ್ಯಕ್ಷತೆ ವಹಿಸಲಿದ್ದು, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಿ.ಆರ್.ಪಿ. ಕವಿತಾ ಅಪಚಂದ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಹಿರಿಯ ಕವಿ ನಾಗೇಂದ್ರಪ್ಪ ಮಾಡ್ಯಾಳೆ ಸೇರಿದಂತೆ ಅನೇಕರು ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here