ಮದುವೆಗೆ ಬಂದವನು ಬೈಕ್ ಅಪಘಾತ ದಿಂದ ಮಸಣಕ್ಕೆ

0
254
ಹುಣಸಗಿ ಬಸವೇಶ್ವರ ವೃತ್ತದ ಬಳಿ ಬೈಕ್ ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲಿಯೆ ಮೃತನಾಗಿದ್ದಾನೆ.

ಸುರಪುರ: ಅಳಿಯನ ಮದುವೆಗೆ ಬಂದು ಮರಳಿ ಹೋಗುವಾಗ ಬೈಕ್ ಅಪಘಾತದಲ್ಲಿ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.

ಸಿಂಧಗಿ ತಾಲ್ಲೂಕಿನ ಸಿಂಧಗೇರಿ ಗ್ರಾಮದ ಮಡಿವಾಳಪ್ಪ ತಂದೆ ದುಂಡಪ್ಪ (25) ಎಂಬ ಯುವಕ ಕಳೆದ ಎರಡು ತಿಂಗಳ ಹಿಂದಷ್ಟೆ ವಜ್ಜಲ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿತ್ತು.

Contact Your\'s Advertisement; 9902492681

ಬುಧವಾರ ಅಳಿಯನ ಮದುವೆಗೆಂದು ಪತ್ನಿಯ ಮನೆಗೆ ವಜ್ಜಲ ಗ್ರಾಮಕ್ಕೆ ಬಂದು ಮದುವೆ ಮುಗಿಸಿಕೊಂಡು ಹುಣಸಗಿಗೆ ಹೋಗುವಾಗ, ಹುಣಸಗಿಯ ಬಸವೇಶ್ವರ ವೃತ್ತದ ಬಳಿಯಲ್ಲಿ ಎದುರಿಗೆ ಬಂದ ವಿಆರ್‌ಎಲ್ ಸಂಸ್ಥೆಯ ಟ್ರಕ್ಕು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಡಿವಾಳಪ್ಪ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.

ಬೈಕ್ ಹಿಂಬದಿಯ ಸವಾರ ಮಹಾಂತೇಶ ತಂದೆ ಬಸ್ಸಣ್ಣ ಲಕ್ಕುಂಡಿ (26) ಕೆ.ತಳ್ಳಳ್ಳಿ ಗ್ರಾಮದ ಯುವಕನಿಗೆ ಗಾಯಗಳಾಗಿದ್ದು ಹುಣಸಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here