ಅಲ್ಪಸಂಖ್ಯಾತರನ್ನು ಹೂಮ್ ಮಿನಿಸ್ಟರ್ ಮಾಡುವ ಯೋಗ್ಯತೆ ಕಾಂಗ್ರೆಸ್ ಗೆ ಇಲ್ಲ: ಉಸ್ತಾದ್

0
24

ಕಲಬುರಗಿ: ಮುಸ್ಲಿಂ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಲಿ ಎಂಬ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಹೇಳಿಗೆ ಜಿಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷರಾದ ನಾಸೀರ್ ಹುಸೇನ್ ಉಸ್ತಾದ್ ಪ್ರತಿಕ್ರಿಯೆ ನೀಡಿ, ಜಮೀರ್ ಅಹ್ಮದ್ ಬೇಜಾವ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿಬೇಕು. ನಮ್ಮ ತಟ್ಟೆಯಲ್ಲಿನ ನೋಣ ನೋಡುವದಕ್ಕೂ ಮುನ್ನ, ನಿಮ್ಮ ತಟ್ಟೆಯನ್ನು ಸ್ವಲ್ಪ ನೋಡಿಕೊಳ್ಳಿ ಎಂದರು.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಅಲ್ಪಸಂಖ್ಯಾತರಿಗೆ ಸಿಎಂ. ಡಿಸಿಎಂ ಅಥವಾ ಪಕ್ಷದ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದೇಯಾ, ಕಾಂಗ್ರೆಸ್ ಗೆ ಒಬ್ಬ ಅಲ್ಪಸಂಖ್ಯಾತ ನಾಯಕನ್ನು ಹೋಮ್ ಮಿನಿಸ್ಟರ್ ಮಾಡುವ ಯೋಗತೆ ಸಹ ಇಲ್ಲ ಎಂದು ಕಿಡಿಕಾರಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿ ಅವರು ಕಾಂಗ್ರೆಸ್ ನಲ್ಲಿರುವ ಅಲ್ಪಸಂಖ್ಯಾತರ ನಾಯಕರಿಗೆ ಚಮಚಾಗಿರಿ ಮಾಡುವ ಪ್ರವೃತಿ ಬಂದುಬಿಟ್ಟಿದೆ. ಡಿಕೆ ಶಿವಕುಮಾರ ಅಂದರೆ ದೇವರು ಅಂತ ಸಲ್ಲಿಮ್ ಹೇಳಿಕೆ ನೀಡುತ್ತಾರೆ. ಮಾಜಿ ಮಂತ್ರಿಗಳು, ಶಾಸಕರು ಸಿದ್ದರಾಮಯ್ಯ ಅವರ ಮಾತು ದೇವರ ಮಾತು ಎಂದು ಹೇಳುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ದೇವರು ಇದ್ದಂಗೆ ಎಂದು ಹೇಳಿಕೆಗಳು ನೀಡುತಾರೆ. ಚಮಚಾಗಿರಿಗೆ ಒಂದು ಇತ್ತಿ ಮಿತಿಗೊತ್ತಿಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here