ದಲಿತರನ್ನು ಅಧಿಕಾರದಿಂದ ದೂರ ಇಟ್ಟಿದ್ದು ಕಾಂಗ್ರೆಸ್ ಪಕ್ಷ: ರುಸ್ತಂಪುರ್

0
12

ಚಿಂಚೋಳಿ: ದಲಿತರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷವಲ್ಲ? ಸಂವಿಧಾನ ಶಿಲ್ಪಯಾದ ಡಾ. ಬಿ.ಆರ್ ಅಂಬೇಡ್ಕರವರು ಇದೇ ಸಂವಿಧಾನ ಶಿಲ್ಪಯನ್ನು ಚುನಾವಣೆಯಲ್ಲಿ ಸೋಲಿಸಿದ್ದು

ಕಾಂಗ್ರೇಸ್ ಪಕ್ಷ ಹಾಗೆಯೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿರುವುದು ಕಾಂಗ್ರೆಸ್ ಅದರಲ್ಲೂ ಸಿದ್ಧರಾಮಯ್ಯ ನವರು ಎಂದು ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಉಪಾಧ್ಯಕ್ಷರಾದ ಶಿವಯೋಗಿ ರುಸ್ತಂಪುರ್ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಇದೇ ಕಾಂಗ್ರೆಸ್ ಪಕ್ಷ ಬಾಬು ಜಗಜೀವನ ರಾಮ ಅವರನ್ನು ಪ್ರಧಾನಮಂತ್ರಿ ಆಗದಂತೆ ನೋಡಿ ಕೊಂಡಿದ್ದು, ಮತ್ತು ಜಿ.ಪರಮೇಶ್ವರವನ್ನು ಸೋಲಿಸಿ ಮುಖ್ಯ ಮಂತ್ರಿಯಾಗದಂತೆ ತಡೆದಿದ್ದು ಯಾರು ಸಿದ್ರಾಮಯ್ಯನವರೆ ಎಂದು ಅವರು ಪ್ರಶ್ನಿಸಿದ್ದಾರೆ.

ಎಲ್ಲ ಸಾಮರ್ಥ್ಯ ಇದ್ದರು ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಯಾಗದಂತೆ ತಡೆಯುತ್ತಿರುವುದು ಕಾಂಗ್ರೇಸ್ ಪಕ್ಷ ಅಲ್ವೆ ಮಾನ್ಯ ಸಿದ್ದರಾಮಯ್ಯನವರೆ ಎಂದು ರುಸ್ತಂಪುರ್ ಅವರು ಸವಾಲು ಹಾಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here