ಕನ್ನಡ ನಾಡಿನ ಎಲ್ಲರ ತನು ಮನ ಕನ್ನಡವಾಗಲಿ: ಡಿವೈಎಸ್ಪಿ ಡಾ:ದೇವರಾಜ್ ಆಶಯ

0
10

ಸುರಪುರ: ತಾಲೂಕು ಆಡಳಿತ,ತಾಲೂಕು ಪಂಚಾಯತ್ ಸುರಪುರ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಿಶೇಷ ಗೀತಗಾಯನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಡಾ:ದೇವರಾಜ್ ಬಿ. ಮಾತನಾಡಿ,ಈ ನಾಡಿನ ಹುಟ್ಟಿದ ಎಲ್ಲ ಕನ್ನಡಿಗರು ನಮ್ಮ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳಬೇಕು,ಕನ್ನಡದ ಅನ್ನ ತಿನ್ನುತ್ತೇವೆ,ಕನ್ನಡದ ನೀರು ಕುಡಿಯುತ್ತೇವೆ,ಕನ್ನಡದ ಗಾಳಿಯನ್ನು ಸೇವಿಸುತ್ತೇವೆ,ಒಂದು ನಾಡು ಹಾಳು ಮಾಡುವುದೆಂದರೆ ಅದು ಕೇವಲ ಕೋಟೆಗಳನ್ನು ಹಾಳು ಮಾಡುವುದರಿಂದ ನಾಡು ಹಾಳಾಗುವುದಿಲ್ಲ,ಆದರೆ ಅಲ್ಲಿಯ ಭಾಷೆಯಿಂದ ನಾಡು ಮತ್ತು ಸಂಸ್ಕೃತಿ ಹಾಳಾಗಲಿದೆ. ಪ್ರತಿಯೊಬ್ಬರ ತನು ಮನ ಕನ್ನಡವಾಗಬೇಕು.ಕನ್ನಡ ಎಂದರೆ ನಮ್ಮ ತಾಯಿ ಎಂದು ತಿಳಿದುಕೊಳ್ಳಬೇಕು.ಆದ್ದರಿಂದ ಎಲ್ಲರು ಸದಾಕಾಲ ಕನ್ನಡದಲ್ಲಿಯೇ ಮಾತನಾಡುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಶಿಕ್ಷಕ ನಿಂಗಣ್ಣ ಗೋನಾಲ ಮಾತನಾಡಿ,ಕನ್ನಡ ಭಾಷೆಗೆ ತನ್ನದೆ ಆದ ವಿಶೇಷವಾದ ಗೌರವ ಸ್ಥಾನಮಾನವಿದೆ.ಸುಮಾರು ೩ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇಂದು ಗ್ರಾಮೀಣ ಭಾಗದಲ್ಲಿ ಉಳಿದಿದ್ದು ಪಟ್ಟಣಗಳಲ್ಲಿ ಅಪಾಯಕ್ಕೆ ಸಿಲುಕಿದೆ,ಅದನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕು.೨೦೦೯ ರಲ್ಲಿ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಲಭಿಸಿದೆ.ಅಂತಹ ಕನ್ನಡ ಭಾಷೆ ನಮ್ಮದೆಂಬ ಅಭಿಮಾನ ಎಲ್ಲರಲ್ಲಿ ಸದಕಾಲ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಆಕಾಶವಾಣಿ ಕಲಾವಿದ ಗಾಯಕ ಬಸವರಾಜ ಬಂಟನೂರ ಅವರ ತಂಡದಿಂದ ಮೊದಲಿಗೆ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ,ಕೆ.ಎಸ್.ನಿಸಾರಅಹ್ಮದ್ ಅವರ ನಿತ್ಯೋತ್ಸವ ಹಾಗು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಮತ್ತು ಸುರಪುರದ ಕವಿ ಎ.ಕೃಷ್ಣ ಸುರಪುರ ಅವರ ಕನ್ನಡವೆ ಜೀವನದ ಉಸಿರಾಗಲಿ ಎಂಬ ಹಾಡು ಎಲ್ಲರ ಗಮನಸೆಳೆಯಿತು.ನಂತರ ಶಾಲಾ ಮಕ್ಕಳಿಂದ ಗೀತಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು,ವೇದಿಕೆ ಮೇಲಿದ್ದ ತಾಲೂಕು ಪಂಚಾಯತಿ ಇಒ ಅಂಬ್ರೇಶ ಮೂಡಲದಿನ್ನಿ ಕನ್ನಡಭಿಮಾನದ ಕುರಿತು ಪ್ರಮಾಣ ವಚನ ಬೊಧೀಸಿದರು.ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಅರಣ್ಯ ಇಲಾಖೆ ಅಧಿಕಾರಿ ಮೌಲಾಲಿಸಾಬ್ ವೇದಿಕೆ ಮೇಲಿದ್ದರು.ಮುಖಂಡರಾದ ವಿರುಪಾಕ್ಷಿಗೌಡ ಕೋನಾಳ,ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ,ಯಲ್ಲಪ್ಪ ಕಲ್ಲೋಡಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.ಶಿಕ್ಷಕ ಹಣಮಂತ್ರಾಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here