ಸುರಪುರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ ಸಂಖ್ಯೆ ೮ ಮತ್ತು ೯ರ ಹಲವಾರು ಜನ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾ ಆರ್.ವಿ.ನಾಯಕ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸಿಬೇಕು ಹಾಗೂ ದಿನಬಳಕೆ ವಸ್ತಗಳ ದಿನಕಳದಂತೆ ದುಬಾರಿಯಾಗುತ್ತಿವೆ ಈ ಕುರಿತು ಜನರಿಗೆ ಮನವರಿಕೆ ಮಾಡಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಲು ಮನವೂಲಿಸಬೇಕು ಹಾಗೂ ಮುಂದೆ ಎಲ್ಲರು ಒಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲಿಸಲು ಶ್ರವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗನಬಸ್ಸಯ್ಯ ಸ್ವಾಮಿ, ಕಾಂತಯ್ಯ ಸ್ವಾಮಿ, ನಂದಪ್ಪ ಹಳ್ಳಿಗೌಡ, ಉಮೇಶ ಕುಂಬಾರ, ನಂದನಗೌಡ ಶಿವಪೊಜೆ, ಮಾಶಪ್ಪ ಗುರಿಕಾರ, ರಾಯಪ್ಪ ಬಿರಾದರ, ಪರಮಣ್ಣ ವಜ್ಜಲ, ಮಹಿಬೂಬ ಸಾಬ, ಮೌನೇಶ ಹಳ್ಳೀಗೌಡ್ರ, ಸೋಮನಗೌಡ ಶೀವಪೊಜೆ, ನಾಗಪ್ಪ ಹಳ್ಳಿಗೌಡ, ಸೋಮಶೇಖರ ಗೌಡಗೇರಾ, ರಂಗನಗೌಡ, ಅಮರೇಶ ಗುರಿಕಾರ, ಸೋಮಶೇಖರ ಗುರಿಕಾರ, ವೆಂಕಟೇಶ ದೊರೆ, ನಂದಪ್ಪ ಗುರಿಕಾರ, ಮಲ್ಲಿಕರ್ಜುನ ಕುಂಬಾರ, ಶರಣು ವಜ್ಜಲ್, ಬಸವರಾಜ ಎಸ್ ಗುರಿಕಾರ, ಕಾಸೀಂ ಸಾಬ ಇನ್ನಿತರರು ಪಕ್ಷಕ್ಕೆ ಸೇರ್ಪಡೆಯಾದರು.
ಮುಖಂಡರಾದ ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ ಪರಮಣ್ಣ ಕುಂಬಾರ ಕಕ್ಕೇರಾ, ಗುಂಡಪ್ಪ ಸೊಲ್ಲಾಪುರ, ಬುಚ್ಚಪ್ಪ ನಾಯಕ, ಬಸ್ಸಯ್ಯ ಸ್ವಾಮಿ, ಚಂದ್ರು ಇನ್ನಿತರರು ಉಪಸ್ಥಿತರಿದ್ದವರು,