ಖಜೂರಿ ಗಡಿಯಲ್ಲಿ ಸಂಘಟಕರಿಂದ ಕನ್ನಡದ ಸ್ವಾಗತ ಫಲಕ ಅಳವಡಿಕೆ

0
9

ಆಳಂದ: ಮಹಾರಾಷ್ಟ್ರ ಹೊಂದಿಕೊಂಡ ಖಜೂರಿಯ ಗಡಿಯಲ್ಲಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ೬೬ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಎರಡು ಗಡಿಯ ಮಧ್ಯ ಕನ್ನಡದ ಹಾರ್ದಿಕ ಸ್ವಾಗತ ಫಲಕವನ್ನು ಅಳವಡಿಸಿ ಉದ್ಘಾಟಿಸಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಅವರು, ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಡಿನಾಡಿನಲ್ಲಿ ಕನ್ನಡ ಕೆಲಸಕ್ಕೆ ನಿರ್ಲಕ್ಷ್ಯ ಸಲ್ಲದು, ಕೂಡಲೇ ಕನ್ನಡ ಶಾಲೆಗಳ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟತೆ ಒತ್ತು ನೀಡುವ ಮೂಲಕ ಗಡಿಭಾಗದ ಕನ್ನಡಿಗರ ಕೂಗಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ಮುಖಂಡ ಕುಮಾರ ಬಂಡೆ, ಶರಣು ಪಾಟೀಲ ಕೊಡಲಹಂಗರಗಾ ಮತ್ತಿತರು ಮಾತನಾಡಿದರು. ಲಕ್ಷ್ಮಣ ಕೋರೆ, ಸಚೀನ ನರೋಣಿ, ಈರಣ್ಣಾಅ ಕೊರಳ್ಳಿ, ಸಚೀನ್ ಬಂಗರಗಿ, ಸಿದ್ಧರಾಮ ಶಹಾಪೂರೆ, ಶ್ರೀಶೈಲ ಭೀಂಪುರೆ, ಶರಣು ಬೋರಗಿ ಮತ್ತು ಕುಮಾರ ಕಂಟೆ ಸೇರಿ ಇನ್ನಿತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here