ಬಟ್ಟೆ ಒಗೆಯಲು ಹೋಗಿ ನೀರಿಗೆ ಬಿದ್ದು ಇಬ್ಬರು ಯುವತಿಯರ ಸಾವು

0
255

ಶಹಾಬಾದ: ಬಟ್ಟೆ ಒಗೆಯಲು ಹೋಗಿದ್ದ ವೇಳೆ ಇಬ್ಬರು ಯುವತಿಯರು ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ  ನಗರದ ರಾಮಘಡ ಆಶ್ರಯ ಕಾಲೋನಿಯ ಸಮೀಪದ ರೇಲ್ವೆ ಹಳಿಯ ಪಕ್ಕದಲ್ಲಿ ಶುಕ್ರವಾರದಂದು ನಡೆದಿದೆ.

ನಗರದ ರಾಮಘಡ ಆಶ್ರಯ ಕಾಲೋನಿಯ ನಿವಾಸಿಗಳಾದ ಮಾಣಿಕಮ್ಮ ಸಾಯಪ್ಪ ದಾಸರ(೨೦) ಮತ್ತು ಕೀರ್ತಿಕಾ ರಾಜೇಶ (೧೨) ಮೃತ ದುರ್ದೈವಿಗಳು.

Contact Your\'s Advertisement; 9902492681

ಮಾಣಿಕಮ್ಮ ಹಾಗೂ ಕೀರ್ತಿಕಾ ಬಟ್ಟೆ ಒಗೆಯಲು ಸಮೀಪದ ರೇಲ್ವೆ ಹಳಿಯ ಪಕ್ಕದಲ್ಲಿರುವ ಹೊಂಡಕ್ಕೆ ಹೋಗಿದ್ದರು.ಬೆಳಿಗ್ಗೆ ೧೦ ಗಂಟೆಗೆ ಹೋದವರು ೧೨ಗಂಟೆಯಾದರೂ ಬರಲಿಲ್ಲ ಎಂದು ಕೀರ್ತಿಕಾ ಮಾವ ಮಂಜುನಾಥ ಬಟ್ಟೆ ಒಗೆಯುವ ಸ್ಥಳಕ್ಕೆ ಹೋಗಿ ನೋಡಿದಾಗ ಬಟ್ಟೆಗಳು ಮಾತ್ರ ಇದ್ದು, ಇಬ್ಬರು ಬಾಲಕಿಯರು ಕಾಣದೇ ಇರುವುದರಿಂದ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಈಜುಗಾರರ ನೆರವಿನಿಂದ ಮೃತ ದೇಹಗಳನ್ನು ತೆಗೆಸಿದ್ದಾರೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here