ಅಪರಾಧ ಕೃತ್ಯಗಳಿಗೆ ನಿಯಂತ್ರಣ ಯಾವಾಗ…?

0
86
  • -ಸಂತೋಷ ಜಾಬೀನ್ ,ಸುಲೇಪೇಟ

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿಯೇ ಗುಂಪೊಂದು ಮಾರಕಾಸ್ತ್ರ ಸಮೇತ ನಿರ್ಭಿತಿಯಿಂದ ಬಂದು ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ನಡೆಸಿರುವುದನ್ನು ನೋಡಿದರೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಪುಷ್ಠಿ ಲಭಿಸುತ್ತದೆ.

ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಯಂತ್ರಣ ಮಾಡಬೇಕಾದ ಸರ್ಕಾರದ ನಿಷ್ಕ್ರೀಯತೆ ಒಂದೆಡೆಯಾದರೆ, ಇನ್ನೊಂದು‌ ಕಡೆ ರಾಜಾ ರೋಷವಾಗಿ ಕೊಲೆಗಳು ನಡೆಯುತ್ತಿರುವುದು ಜಿಲ್ಲಾ ಪೊಲೀಸರ ನಡೆಯನ್ನು ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಕೊಲೆ, ಸುಲಿಗೆ ಅತ್ಯಾಚಾರದಂತಹ ಕೃತ್ಯಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು ಸಹಜ. ಇದರಿಂದ ನಗರದಲ್ಲಿ ಭಯದ ವಾತವರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಯಾರು ಅಲ್ಲಗಳೆಯುವಂತಿಲ್ಲ.

Contact Your\'s Advertisement; 9902492681

ನಗರದ ಜನರೂ ಸದಾ ಭಯದಲ್ಲಿ ಇರುವಂತಹ ವಾತಾವರಣ ಸೃಷ್ಟಿಯಾಗಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಮೂಲಕ‌ ಪೊಲೀಸರು‌ ನಗರದ ಜನರ ನೆಮ್ಮದಿಗೆ ಕಾರಣರಾಗಬೇಕಾದ ತುರ್ತು ಅಗತ್ಯವಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇವುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ತಪ್ಪಿತಸ್ಥ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಹಿರಿಯ ಪೊಲೀಸ ಅಧಿಕಾರಿಗಳು ರೌಡಿಗಳ‌ ಹೆಡೆಮುರಿ ಕಟ್ಟಿದಾಗ ಮಾತ್ರ ನಗರದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಜಿಲ್ಲೆಯಲ್ಲಿ ಗುಂಪು ಹಲ್ಲೆಗಳು, ಮಾರಾಮಾರಿಗಳು‌ ಮೀತಿ ಮೀರಿವೆ.

ಇವುಗಳಿಗೂ ಸಂಪೂರ್ಣವಾಗಿ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಕ್ರಮಕೈಗೊಳ್ಳಬೇಕು ಅಪರಾಧಗಳು ನಿಯಂತ್ರಿಸಲು ಸದಾ ಎಚ್ಚರಿಕೆಯಿಂದ ಕಾರ್ಯಪ್ರವೃತರಾಗಬೇಕಿದೆ ಇಲ್ಲದಿದರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಯಾವಾಗ ? ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಪೊಲೀಸರು ಅವಕಾಶಕೊಡಬಾರದು ಎಂಬುದೇ ನಮ್ಮ ಆಶಯ.‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here