ಮಳಿಗೆ ಶೆಟರ್ ಮುರಿದು ಹಣ ದೋಚಿ ಪರಾರಿ

0
89

ಕಲಬುರಗಿ: ಮಳಿಗೆಯೊಂದರ ಶೆಟರ್ ಮುರಿದು ಸುಮಾರು ೨೦೦೦ರೂ.ಗಳನ್ನು ದೋಚಿ ಪರಾರಿಯಾದ ಘಟನೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಇರುವ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿನ ಎಂ.ಡಿ. ರಾಜ್ ಕಾಂಪ್ಲೆಕ್ಸ್‌ನಲ್ಲಿ ವರದಿಯಾಗಿದೆ.

Contact Your\'s Advertisement; 9902492681

ಶ್ರೀ ಬಾಲಾಜಿ ಮಾರ್ಕೆಟಿಂಗ್‌ನಲ್ಲಿಯೇ ಕಳ್ಳತನವಾಗಿದೆ. ಎಂದಿನಂತೆ ಬಾಲಾಜಿ ಮಾರ್ಕೆಟಿಂಗ್ ಮಳಿಗೆಯ ವ್ಯಾಪಾರಿಗಳು ವಹಿವಾಟು ಮುಗಿಸಿ ರಾತ್ರಿ ಬೀಗ ಹಾಕಿಕೊಂಡು ಹೋದಾಗ ರಾತ್ರಿ ಯಾರೋ ಶೆಟರ್ ಬೀಗ ಮುರಿದು ಒಳಹೋಗಿ ಕೇವಲ ೨೦೦೦ರೂ.ಗಳನ್ನು ದೋಚಿಕೊಂಡು ಹೋಗಿದ್ದಾರೆ. ಆದಾಗ್ಯೂ, ಮಳಿಗೆಯಲ್ಲಿದ್ದ ಬೆಲೆಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಲ್ಲ.

ಕೇವಲ ಹಣಕ್ಕಾಗಿಯೇ ಈ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮದ್ಯವ್ಯಸನಿಗಳ ಕೈವಾಡ ಇರುವ ಕುರಿತು ಅನುಮಾನವಿದೆ. ಸುದ್ದಿ ತಿಳಿದು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯ ಪಿಎಸ್‌ಐ ಉದ್ಧಂಡಪ್ಪ ಮಣ್ಣೂರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here