ಕಂಪ್ಲಿ ನ8:-ರಂದು, ಇತ್ತೀಚಿಗೆ ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಕನ್ನಡ ಚಲನಚಿತ್ರ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪುನೀತ್ ರಾಜ್ ಕುಮಾರ್ ಹೆಸರನ್ನು ಕಂಪ್ಲಿ-ಕೊಟ್ಟಾಲ್ ರಸ್ತೆಗೆ ನಾಮಕರಣ ಮಾಡುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಕೆ ಶಿವ ಕುಮಾರ್ ನೇತೃತ್ವದಲ್ಲಿ ಕಂಪ್ಲಿ ಪುರಸಭಾ ಮುಖ್ಯಾಧಿಕಾರಿಗಳಾದ ಎನ್ ಶಿವಲಿಂಗಪ್ಪನವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಭಾರತೀಯ ದಲಿತ ಪ್ಯಾಂಥರ್ ನ ಕಂಪ್ಲಿ ತಾಲೂಕು ಅಧ್ಯಕ್ಷ ಸೈಯದ್ ವಾರೀಶ್ ಎನ್ ನವರು ರಾಜ್ಯದ ಪ್ರಖ್ಯಾತ ನಟ ಬಾಲ್ಯದಿಂದ ಪ್ರಸ್ತುತದವರೆಗೂ ಉತ್ತಮ ಸಂದೇಶ ಹೊಂದಿರುವ ಕೌಟಂಬಿಕ ಚಿತ್ರಗಳಲ್ಲಿ ಅಭಿನಯಿಸಿ ನಟನೆ ಮತ್ತು ಸಮಾಜ ಸೇವೆಯಿಂದಲೇ ರಾಜ್ಯವಲ್ಲದೆ ಹೊರ ರಾಜ್ಯದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿ ರಾಜ್ಯದ ಮನೆಮಾತಾಗಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿ. ಪುನೀತ್ ರಾಜ್ ಕುಮಾರ್ ರವರು ಇತ್ತಿಚ್ಚೆಗೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದು ಅಪಾರ ಅಭಿಮಾನಿಗಳ ದುಖಃಕ್ಕೆ ಕಾರಣವಾಗಿರುತ್ತದೆ,
ದಿವಂಗತ ಪುನೀತ್ ರಾಜ್ ಕುಮಾರ್ ರವರ ತಂದೆಯವರ ಕಾಲದಿಂದಲೂ ಕಂಪ್ಲಿ ಬಗ್ಗೆ ವಿಶೇಷವಾದ ಅಭಿಮಾನವನ್ನ ಡಾ.ರಾಜ್ ಕುಮಾರ್ ಕುಟುಂಬವು ಹೊಂದಿರುತ್ತಾರೆ ಹಾಗಾಗಿ ಡಾ.ರಾಜ್ ಕುಮಾರ್ ರವರು ಮರಣದ ನಂತರ ಕಂಪ್ಲಿಯ ಮುಖ್ಯ ರಸ್ತೆಗೆ ಅವರ ಸ್ಮರಣಾರ್ಥವಾಗಿ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿರುತ್ತದೆ.
ಅದರಂತೆ ದಿ.ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಕಂಪ್ಲಿಯ ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ಕೊಟ್ಟಾಲ್ಗೆ ಹೋಗುವ ರಸ್ತೆಯನ್ನ *“ ಪುನೀತ್ ರಾಜ್ ಕುಮಾರ್ ರಸ್ತೆ “* ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿದರು,
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್. ಮನೋಜ್ ಕುಮಾರ್ ಡಿ. ಮರೇಶ್ ದೇವಲಾಪುರ, ರಮೇಶ್ ಕುಂಟೋಜಿ, ಕರಿಬಸವರಾಜ್, ಪಾಲ್ಗೊಂಡಿದ್ದರು.