15 ರಂದು ರೈತ ಕೃಷಿ ಸಾಲಕ್ಕಾಗಿ ಮತ್ತು  ಸಹಕಾರ ಸಂಘಗಳ ಉಳಿವಿಗಾಗಿ ರೈತ ಸಮಾವೇಶ

0
116

ಕಲಬುರಗಿ:  ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಇದ್ದಾಗ ರೈತರ 50,000 ಸಾಲ ಮನ್ನಾ ಮಾಡಿದ್ದಾರೆ ಆ ಹಣ ರೈತರಿಗೆ ಡಿಸಿಸಿ ಬ್ಯಾಂಕಿನವರು ಹಣಕಾಸಿನ ನಿರ್ವಹಣೆ ತಪ್ಪು ಮಾಡಿದ್ದರಿಂದ ಆ ಹಣ ಮನ್ನ ಮಾಡದೇ ರೈತರಿಗೆ ಅನ್ಯಾಯವಾಗಿದೆ ಎಂದು ಸಿಪಿಐ(ಎಂ) ಪಕ್ಷದ ಮುಖಂಡ ಶರಬಸಪ್ಪ ಮಮಶೇಟಿ ಆರೋಪಿಸಿದ್ದಾರೆ.

ಕಲಬುರಗಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕಿನ ಹಣಕಾಸಿನ ನಿರ್ವಹಣೆ ಕಾನೂನು ಕ್ರಮಬದ್ಧವಾಗಿ ನಡೆಯಲಿಲ್ಲ, 2002 ನೂರು ಜನರಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡಿರುವುದೇ ಬ್ಯಾಂಕ್‌ ದಿವಾಳಿ ಆಗಲು ಕಾರಣವಾಗಿದೆ ಅವರಷ್ಟೇ ಡಿಸಿಸಿ ಬ್ಯಾಂಕ್‌ ದಿವಾಳಿ ಆಗಿದ್ದಲ್ಲ ಜಿಲ್ಲೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ ಸಾಲ ಪಡೆದ ಎಲ್ಲಾ ರೈತರಿಗೂ ಹಿಂದಿನ ಸರ್ಕಾರದ ಸಿದ್ದರಾಮಯ್ಯನವರ ಆಡಳಿತ ಸರ್ಕಾರದಲ್ಲಿ ಸಾಲ ಪಡೆದ ರೈತರಿಗೆ ಎಲ್ಲರಿಗೂ ಅನ್ಯಾಯವಾಗಿದೆ ಎಂದರು.

Contact Your\'s Advertisement; 9902492681

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ ಸತತವಾಗಿ ಈ ತಪ್ಪು ಕಳಪೆ ಹಣಕಾಸು ನಿರ್ವಹಣೆ ರೈತರ ಹಿತಾಸಕ್ತಿ ಕಡೆಗಣನೆ ಭ್ರಷ್ಟಾಚಾರ ಸ್ವಜನಪಕ್ಷಪಾತ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಬ್ಯಾಂಕಿನ ಸಾಲದ ನೀತಿ ಕಡೆಗಣಿಸಿ ರೈತರ ಹಿತ ಕಡೆಗಣಿಸಿ ಸಾಲಮನ್ನಾ ಮಾಡಿರುವುದು ಸೂಕ್ತವಾದ ತನಿಖೆಯಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸಾಲ ಮಂಜೂರಾತಿಯನ್ನು ಡಿಸಿಸಿ ಬ್ಯಾಂಕಿನ ಬದಲಿಗೆ ಅಪೆಕ್ಸ್‌ ಬ್ಯಾಂಕಿಗೆ ಕಾರ್ಯನಿರ್ವಹಿಸಲು ಹಣಕಾಸಿನ ವ್ಯವಹರಿಸಲು ಅನುಮತಿ, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ದುಡಿಯುವ ಸಿಬ್ಬಂದಿ ಬದುಕಿನ ಉದ್ದಕ್ಕೂ ಸಂಬಳದಲ್ಲಿ ದುಡಿಯುತ್ತಿರುವವರಿಗೆ ಸೇವಾ ಸೌಲಭ್ಯಗಳು ಒದಗಿಸಿ, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹಿಸಿ,15 ರಂದು  ನೆಹರು ಗಂಜನ ರೈತ ಭವನ್‌ ರೈತ ಕೃಷಿ ಸಾಲಕ್ಕಾಗಿ ಸಹಕಾರ ಸಂಘಗಳ ಉಳಿವಿಗಾಗಿ ಸಮಾವೇಶ ಈ ಸಮಾವೇಶವನ್ನು ಕಾಮ್ರೇಡ್‌ ಮಾರುತಿ ಮಾನಪಡೆ ನೇತೃತ್ವದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಕುಂದ್ರಾವು ಪಾಟೀಲ, ರೇವಣಸಿದ್ದ ಹೆಬ್ಬಾಳ, ಅವ್ವಣ್ಣಾ ಕವುಲಗಾ, ಅಲ್ತಾಫ್‌ ಇನಾಮಂದಾರ್‌, ಬಸವರಾಜ್‌ ಬಿರಾದಾರ, ಹಾಗರಗಿ ಶಾಂತಪ್ಪ ಪಾಟೀಲ, ವಿರಬದ್ರ ಕಲಬುರಗಿ ಅಶೋಕ್‌ ಮ್ಯಾಗೇರಿ, ಸುಧಾಮ ಧನ್ನಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here