ಹಲ್ಲೆ ಪ್ರಕರಣ: ಪೊಲೀಸರ ವಿರುದ್ಧ ಸಿಐಡಿ ತನಿಖೆಗೆ ಆಗ್ರಹಿಸಿ ಧರಣಿ

0
129

ಕಲಬುರಗಿ: ಅಫಜಲಪುರದ ಕೋಲಿ ಸಮಾಜದ ಮುಖಂಡ ದುಂಡಪ್ಪ ಜಮಾದಾರ ಎಂಬುವವರ ಮೇಲೆ ನಗರದ ಚೌಕ ಠಾಣೆ ಪೊಲೀಸರು ನಡೆಸಿದರು ಎನ್ನಲಾದ ಹಲ್ಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವಜಾ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಮಹಾದೇವ ಕೋಳಕೂರ, ಭೀಮಶಾ ಖನ್ನಾ, ವಿಜಯಕುಮಾರ ಜೋಗೂರ, ರಾಜಕುಮಾರ ಕಪನೂರ, ಬಾಬು ಪರಸೋನ, ವಿಕ್ರಮ ಅಷ್ಟಗಿ, ರಾಹುಲ ಶಾಸ್ತ್ರಿ, ಸಾತಪ್ಪ ತೆಗನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here